somaling m uppar kawalga

somaling m uppar kawalga
Somaling Sulubai uppar

ಸೋಮವಾರ, ಮಾರ್ಚ್ 29, 2021

G k



              ಸ್ಪರ್ಧಾತ್ಮಕದತ್ತ ಸಾಧನೆ
_________________________________________________________________

1) "ಭಾರತದ ಮೆಕವಲ್ಲಿ" ಎಂದು ಯಾರನ್ನು ಕರೆಯುತ್ತಾರೆ?
 * ಕೌಟಿಲ್ಯ/ಚಾಣಕ್ಯ.

2) ರಾಜಾರಾಮ್ ಮೋಹನರಾಯ್ ರನ್ನು "ಭಾರತದ ನವೋದಯದ ಪಿತಾಮಹ" ಎಂದು ಕರೆದವರು ಯಾರು?
 * ಮಹಾತ್ಮ ಗಾಂಧೀಜಿ.

3) ಹಿಟ್ಲರ್ ಸ್ಥಾಪಿಸಿದ ರಾಜಕೀಯ ಪಕ್ಷ ಯಾವುದು?
 *ನಾಜಿಪಕ್ಷ.

4) "ಭಾರತದ ಷೇಕ್ಸ್ ಪಿಯರ್" ಎಂದು ಯಾರನ್ನು ಕರೆಯುತ್ತಾರೆ?
 * ಕಾಳಿದಾಸ.

5) "ಭಾರತೀಯ ಪುನರುಜ್ಜೀವನದ ಪಿತಾಮಹ" ಯಾರು?
 * ರಾಜರಾಮ್ ಮೋಹನ್ ರಾಯ್.

6) "ಭಾರತದ ನೆಪೋಲಿಯನ್" ಎಂದು ಯಾರನ್ನು ಕರೆಯುತ್ತಾರೆ?
 * ಸಮುದ್ರಗುಪ್ತ.

7) ರಾಜಾರಾಮ್ ಮೋಹನ ರಾಯರಿಗೆ "ರಾಜಾ" ಎಂಬ ಬಿರುದು ನೀಡಿದವರು ಯಾರು?
 * ಮೊಗಲ್ ಬಾದ್ ಷಾಹ (1829 ರಲ್ಲಿ).

8) "ಭಾರತದ ಗಿಳಿ" ಎಂದು ಯಾರನ್ನು ಕರೆಯುತ್ತಾರೆ?
 * ಅಮೀರ್ ಖುಸ್ರು.

9) ಗಣೇಶ ಮತ್ತು ಶಿವಾಜಿ ಉತ್ಸವಗಳನ್ನು ಪರಿಚಯಿಸಿದವರು ಯಾರು?
 * ಬಾಲಗಂಗಾಧರ ತಿಲಕ್.

10) ಆರ್ಯ ಸಮಾಜವನ್ನು ಯಾವಾಗ ಸ್ದಾಪಿಸಲಾಯಿತು?
 * 1875 ರಲ್ಲಿ.(ಮುಂಬೈ).

11) ದಯಾನಂದ ಸರಸ್ವತಿಯವರ ಮೂಲ ಹೆಸರೇನು?
 * ಮೂಲಶಂಕರ.

12) ಗಾಂಧೀಜಿಯ ರಾಜಕೀಯ ಗುರು ಯಾರು?
 * ಗೋಪಾಲಕೃಷ್ಣ ಗೋಖಲೆ.

13) "ಸತ್ಯಾರ್ಥ ಪ್ರಕಾಶ" ಕೃತಿಯ ಕರ್ತೃ ಯಾರು?
 * ಸ್ವಾಮಿ ದಯಾನಂದ ಸರಸ್ವತಿ.

14) ಸಿಂಧೂ ಬಯಲಿನ ನಾಗರಿಕರಿಗೆ ಸಂಬಂಧಿಸಿದ "ಸಾರ್ವಜನಿಕ ಈಜುಕೊಳ" ಎಲ್ಲಿದೆ?
 * ಮೊಹೆಂಜೋದಾರೋ.

15) "ರೂಪಾರ್" ಯಾವ ರಾಜ್ಯದಲ್ಲಿದೆ?
 * ಪಂಜಾಬ್.

16) ಅಲಹಾಬಾದ್ ಒಪ್ಪಂದವಾದದ್ದು ಯಾವಾಗ?
 * 1765 ರಲ್ಲಿ.

17) "ಸೂಫಿ ಮಂದಿರ" ಎಲ್ಲಿದೆ?
 * ಅಜ್ಮೀರ್ ದಲ್ಲಿದೆ.(ರಾಜಸ್ಥಾನ).

18) "ಸೇಂಟ್ ಜಾರ್ಜ್ ಕೋಟೆ" ಎಲ್ಲಿದೆ?
 * ಮದ್ರಾಸ್.

19) ಗಾಂಧೀಜಿಯವರು "ಮಾಡು ಇಲ್ಲವೇ ಮಡಿ" ಎಂಬ ಕರೆಯನ್ನು ಎಲ್ಲಿ ನೀಡಿದರು?
 * ಮುಂಬೈನಲ್ಲಿ.

20) 3 ನೆಯ ತೀರ್ಥಂಕರ ಯಾರು?
 * ಅಜಿತನಾಥ.

21) "ವೈಹಾಂಡ್ ಕದನ" ಯಾರ ಯಾರ ನಡುವೆ ನಡೆಯಿತು?
 * ಆನಂದಪಾಲ ಮತ್ತು ಮಹಮ್ಮದ್ ಘಜ್ನಿ.

22) "ಚೌಸ ಕದನ" ಯಾರ ಯಾರ ನಡುವೆ ನಡೆಯಿತು?
 * ಹುಮಾಯುನ್ ಮತ್ತು ಶೇರ್ ಷಾ.

23) 'ಅಮೀರ್ ಖುಸ್ರು' ಯಾರ ಆಸ್ಥಾನ ಕವಿ?
 * ಅಲ್ಲಾವುದ್ದೀನ್ ಖಿಲ್ಜಿ.

24) 'ಮಹಾಬಲಿಪುರಂ ದೇವಾಲಯಗಳು' ಯಾರಿಗೆ ಸಂಬಂಧಿಸಿವೆ?
 * ಚೋಳರಿಗೆ.

25) ಬ್ರಿಟಿಷರು ಮೊದಲ ವ್ಯಾಪಾರ ಕೋಠಿಯನ್ನು ಎಲ್ಲಿ ಸ್ಥಾಪಿಸಿದರು?
 * ಸೂರತ್ ನಲ್ಲಿ.

26) ಭಾರತದಲ್ಲಿ ಫ್ರೇಂಚರ ಅಧಿಪತ್ಯ ಕೊನೆಗೊಂಡಿದ್ದು ಯಾವ ಯುದ್ಧದಿಂದ?
 * ವಾಂಡಿವಾಷ್.

27) ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯನ್ನು ಸ್ಥಾಪಿಸಿದವನು ಯಾರು?
 * ಲಾರ್ಡ್ ಕರ್ಜನ್ (1904 ರಲ್ಲಿ).

28) ಕರ್ಜನ್ ವೈಲಿಯನ್ನು ಹತ್ಯೆ ಮಾಡಿದವನು ಯಾರು?
 * ಮದನ್ ಲಾಲ್ ಡಿಂಗ್ರ.

29) ಕಣ್ವ ಕಾಳಗ ನಡೆದದ್ದು ಯಾವಾಗ?
 * 1527 ರಲ್ಲಿ (ಬಾಬರ್ ಮತ್ತು ರಜಪೂತರ ನಡುವೆ).

30) ಬಾಬರ್ ಮತ್ತು ಇಬ್ರಾಹಿಂ ಲೋಧಿ ನಡುವೆ ನಡೆದ ಯುದ್ಧ ಯಾವುದು?
 * ಮೊದಲ ಪಾಣಿಪತ್ ಕಾಳಗ ( 1526).

31) 'ಮೈಕಲ್ ಓ ಡೈಯರ್' ನನ್ನು ಹತ್ಯೆ ಮಾಡಿದವನು ಯಾರು?
 * ಉದಂಸಿಂಗ್.

32) 'ಅಂಬರ್ ಕೋಟೆ' ಯಾವ ರಾಜ್ಯದಲ್ಲಿದೆ?
 * ರಾಜಸ್ಥಾನ.

33) ಕಾನೂನು ಭಂಗ ಚಳುವಳಿ ಪ್ರಾರಂಭವಾದಾಗ ಭಾರತದ ವೈಸರಾಯ ಯಾರಾಗಿದ್ದರು?
 * ಲಾರ್ಡ್ ಇರ್ವಿನ್.

34) ಚಿತ್ತಗಾಂವ್ ಸೇನಾ ಶಿಬಿರದ ಮೇಲೆ ದಾಳಿ ಮಾಡಿದವನು ಯಾರು?
 * ಸೂರ್ಯಸೇನ್.

35) ಫ್ರೇಂಚರಿಗೆ 'ಮಚಲೀಪಟ್ಟಣ' ನೀಡಿದವನು ಯಾರು?
 * ಮುಜಾಫರ್ ಜಂಗ್.

36) ಗಾಂಧಿ-ಇರ್ವಿನ್ ಒಪ್ಪಂದದ ಇನ್ನೊಂದು ಹೆಸರೇನು?
 * ದೆಹಲಿ ಒಪ್ಪಂದ (1931).

37) ಆಗ್ರಾದ ಮೋತಿ ಮಸೀದಿಯ ನಿರ್ಮಾಪಕರು ಯಾರು?
 * ಷಹಜಹಾನ್.

38) "ದಿವಾನ್-ಕಿ-ಖಾಸ್" ಎಲ್ಲಿದೆ?
 * ಫತೇಪುರ್ ಸಿಕ್ರಿಯಲ್ಲಿದೆ.

39) "ಭಾರತದ ಸ್ಥಳೀಯ ಸರ್ಕಾರಗಳ ಜನಕ" ಯಾರು?
 * ಲಾರ್ಡ್ ರಿಪ್ಪನ್.

40) ಕಾಳಿದಾಸ ಯಾರ ಆಸ್ಥಾನದಲ್ಲಿದ್ದನು?
 * ಎರಡನೇ ಚಂದ್ರಗುಪ್ತ.

41) 1857 ರ ದಂಗೆಯಲ್ಲಿ ಬಿಹಾರದ ಮುಂದಾಳತ್ವ ವಹಿಸಿದವನು ಯಾರು?
 * ಕುನ್ವರ್ ಸಿಂಗ್.

42) ಕಪ್ಪು ಕೋಣೆ ದುರಂತದಲ್ಲಿ ಮರಣ ಹೊಂದಿದವರ ಸಂಖ್ಯೆ ಎಷ್ಟು?
 * 123.

43) "ಅಹಂ ಬ್ರಹ್ಮಾಸ್ಮಿ" ಎಂದು ಪ್ರತಿಪಾದಿಸಿದವರು ಯಾರು?
 * ಶಂಕರಾಚಾರ್ಯರು.

44) 1757 ರ ಪ್ಲಾಸಿ ಕದನ ಯಾವ ತಿಂಗಳಿನಲ್ಲಿ ನಡೆಯಿತು?
 * ಜೂನ್.

45) ಸ್ವರಾಜ್ ಪಕ್ಷ ಸ್ಥಾಪನೆಯಾದದ್ದು ಯಾವಾಗ?
 * 1922 ರಲ್ಲಿ.

46) ಯಾವ ದೆಹಲಿ ಸುಲ್ತಾನನ್ನು "ವೈರುಧ್ಯಗಳ ಮಿಶ್ರಣ" ಎಂದು ಕರೆಯುತ್ತಾರೆ?
 * ಮಹಮ್ಮದ್ ಬಿನ್ ತುಘಲಕ್.

47) "ತೊಘಲಕ್ ಒಬ್ಬ ಪರಸ್ವರ ವಿರುದ್ಧ ಗುಣಗಳ ಮಿಶ್ರಣ" ಎಂದು ಹೇಳಿದವರು ಯಾರು?
 * ವಿ.ಎ.ಸ್ಮಿತ್.

48) "ಸಹಾಯಕ ಸೈನ್ಯ ಪದ್ದತಿ"ಯನ್ನು ಜಾರಿಗೆ ತಂದವನು ಯಾರು?
 * ಲಾರ್ಡ್ ವೆಲ್ಲೆಸ್ಲಿ.

49) ವಿದೇಶಿ ವಸ್ತುಗಳನ್ನು ಬಹಿಷ್ಕರಿಸಲು ಗಾಂಧೀಜಿ ಕರೆ ನೀಡಿದ್ದು ಯಾವ ಚಳುವಳಿಯಲ್ಲಿ?
 * ಅಸಹಕಾರ ಚಳುವಳಿ (1920-1922).

50) ಕನ್ನಡದ ಮೊದಲ ಪತ್ರಿಕೆ ಯಾವುದು?
 * ಮಂಗಳೂರು ಸಮಾಚಾರ ( 1843, ಮೋಗ್ಲಿಂಗ್).

51) ಹರ್ಷವರ್ಧನ ಮಗಧದ ರಾಜನೆಂದು ಕರೆದುಕೊಂಡದ್ದು ಯಾವಾಗ?
 * ಸಾ.ಶ. 641 ರಲ್ಲಿ.

G k

💦ವಿಷಯ- ಸಾಮಾನ್ಯ ಜ್ಞಾನ💦
1. ರಾಮನ್ ಮ್ಯಾಗ್ಸೆಸೆ ಪ್ರಶಸ್ತಿ ಎಷ್ಟು ಕ್ಷೇತ್ರಗಳಲ್ಲಿ ನೀಡುವರು?
1. 04.
2. 06.●●
3. 08.
4. 10.

2. ಭಾರತದ ಪ್ರಥಮ ದೇಶಿಯ ಕ್ಷಿಪಣಿ ಹೆಸರೇನು?
1. ವಿಜಯಂತಾ.
2. ಪೃಥ್ವಿ.●●
3. ತೇಜಸ್.
4. ಅನಾಮಿಕ.

3. ಜೈನರ ಕಾಶಿ ಎಂದು ಪ್ರಸಿದ್ದಿ ಪಡೆದಿರುವ ಕರ್ನಾಟಕದ ಸ್ಥಳ ಯಾವುದು?
1. ಮೂಡಬಿದ್ರೆ.
2. ವಿಠ್ಠಲಪುರ.
3. ಶ್ರವಣಬೆಳಗೋಳ.●●
4. ಚಂದ್ರಾಪೂರ.

4. ವಿಶ್ವದಲ್ಲೇ ಅತ್ಯಂತ ಉದ್ದದ ರೈಲು ಮಾರ್ಗವಾದ ‘ಟ್ರಾನ್ಸ ಸೈಬೆರಿಯನ್ ‘ ಯಾವ ದೇಶದಲ್ಲಿದೆ?
1. ರಷ್ಯಾ.●●
2. ಜಪಾನ.
3. ಜರ್ಮನಿ.
4. ಚೀನಾ.

5. ಈ ಕೆಳಗಿನ ವ್ಯಕ್ತಿಗಳಲ್ಲಿ ಯಾರು ಅಂತರರಾಷ್ಟ್ರೀಯ ನ್ಯಾಯಾಲಯದಲ್ಲಿ ಕಾರ್ಯ ನಿರ್ವಹಿಸಿಲ್ಲ?
1. ನಾಗೇಂದ್ರ ಸಿಂಗ್.
2. ಬೆನೆಗಲ್ ರಾಮರಾವ.
3. R.S. ಪಂಂಡಿತ.
4. ಡಾ. ರಾಧಾಸಿಂಗ್.●●

6. ಈ ಕೆಳಕಂಡ ವ್ಯಕ್ತಿಗಳಲ್ಲಿ ಯಾರು UNESCO ದ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದರು?
1. ಶಶಿ ಥರೂರ್.
2. ವಿಜಯಲಕ್ಷ್ಮೀ ಪಂಡಿತ.
3. ರಾಧಾಕೃಷ್ಣನ್.●●
4. ಮೇಲಿನ ಯಾರು ಅಲ್ಲ.

7. ‘ವಿಶ್ವಸಂಸ್ಥೆ’ ಎಂಬ ಪದವನ್ನು ನೀಡಿದವರು ಯಾರು?
1. ಜಾನ್ ಡಿ ರಾಕಫೆಲ್ಲರ್.
2. ಡಿ.ರೂಸವೆಲ್ಟ್.●●
3. ವಿನ್ಸಟನ್ ಚರ್ಚಿಲ್.
4. ವುಡ್ರೋ ವಿಲ್ಸನ್.

8. ಪ್ರಸ್ತುತ ವಿಶ್ವಸಂಸ್ಥೆಯ ಸದಸ್ಯ ರಾಷ್ಟ್ರಗಳೆಷ್ಟು?
1. 192.
2. 193.●●
3. 194.
4. ಯಾವುದು ಅಲ್ಲ.

9. ‘ವಿಹಾರ’ ಇದು ಯಾವ ಧರ್ಮದ ಪವಿತ್ರ ಸ್ಥಳವಾಗಿದೆ?
1. ಬೌದ್ದ.●●
2. ಜೈನ.
3. ಪಾರ್ಸಿ.
4. ಹಿಂದೂ.

10. ‘ಬನಾರಸ್ ವಿಶ್ವವಿದ್ಯಾಲಯ’ ಸ್ಥಾಪಿಸಿದವರು ಯಾರು?
1. ರಾಜಾಜಿ ಗೋಪಾಲಚಾರ್ಯ.
2. ಜಿ.ವಿ.ಮಾಳವಾಂಕರ.
3. ಗೋವಿಂದ ರಾನಡೆ.
4. ಮದನ ಮೋಹನ ಮಾಳವಿಯ.●●

11. ಫೈಯರ ಟೆಂಪಲ್(FIRE TEMPLE) ಇದು ಧರ್ಮಕ್ಕೆ ಸಂಬಂಧಿಸಿದೆ?
1. ಯಹೂದಿ.
2. ಪಾರ್ಸಿ.●●
3. ಕ್ರೈಸ್ತ.
4. ಮೇಲಿನ ಯಾವುದು ಅಲ್ಲ.

12. ಪುರಂದರದಾಸರನ್ನು ಕರ್ನಾಟಕದ ಸಂಗೀತ ಪಿತಾಮಹ ಎಂದು ಕರೆದವರು ಯಾರು?
1. ಮುತ್ತುಸ್ವಾಮಿ.
2. ಶ್ಯಾಮಶಾಸ್ತ್ರೀ.
3. ತ್ಯಾಗರಾಜ.●●
4. ಹರ್ಡೇಕರ್ ಮಂಜಪ್ಪ.

13. ಸಂಗೀತದ ಬಗ್ಗೆ ಮೊಟ್ಟ ಮೊದಲಿಗೆ ವಿವರಣೆ ನೀಡುವ ವೇದ ಯಾವುದು?
1. ಋಗ್ವೇದ.
2. ಸಾಮವೇದ.●●
3. ಯಜುರ್ವೇದ.
4. ಅಥರ್ವವೇದ.

14. ತಾನಸೇನರ ಮೊದಲಿನ ಹೆಸರೇನು?
1.ರಾಮತಾನು. ◆◆
2. ಶಮಂತ
3.ರೂಪಸೇನ
4. ಅಲ್ಲಾಭಕ್ಷ

15. ಭಾರತದ GSAT-16 ಉಪಗ್ರಹವನ್ನು, ಫ್ರೆಂಚ್ ಗಯಾನಾದ ಕೌರೊ ಉಪಗ್ರಹ ಉಡಾವಣಾ ಕೇಂದ್ರದಿಂದ ಇಂದು ಉಡಾವಣೆ ಮಾಡಲಾಯಿತು. ಈ ಪ್ರದೇಶ ಯಾವ ದೇಶಕ್ಕೆ ಸಂಬಂಧಿಸಿದೆ?
1. ಜರ್ಮನಿ
2. ಫ್ರಾನ್ಸ . ◆◆
3. ಬ್ರೆಜಿಲ್
4. ಗ್ರೇಟ್ ಬ್ರಿಟನ್

16.10 ಕಾರ್ಮಿಕರು 10 ದಿನಗಳಲ್ಲಿ 10 ಕೋಷ್ಟಕಗಳನ್ನು ಮಾಡಬಲ್ಲರು, ಹಾಗಾದರೆ 5 ಕೋಷ್ಟಕಗಳನ್ನು ಮಾಡಲು 5 ಕಾರ್ಮಿಕರು ಎಷ್ಟು ದಿನಗಳನ್ನು ತೆಗೆದುಕೊಳ್ಳುವರು?
ಎ) 1
ಬಿ) 5
ಸಿ) 10. ◆◆
ಡಿ) 25

17. ಪೂಜಾ ಮತ್ತು ದೀಪಾ ವಯಸ್ಸಿನ ಅನುಪಾತ 4 : 5 ಇದೆ. 4 ವರ್ಷಗಳ ಹಿಂದೆ, ಅವರ ವಯಸ್ಸಿನ ಅನುಪಾತ 8:11 ಇತ್ತು. ಪೂಜಾಳ ಪ್ರಸ್ತುತ ವಯಸ್ಸನ್ನು ಕಂಡು ಹಿಡಿಯಿರಿ.
ಎ) 12. ◆◆
ಬಿ) 15
ಸಿ) 14

18. ಈ ಕೆಳಗಿನ ಯಾವ ರಾಜ್ಯದ ಮುಖ್ಯಮಂತ್ರಿಗಳು ಪಂ.ಬಂಗಾಳದ ಮುಖ್ಯಮಂತ್ರಿ ಜ್ಯೋತಿಬಸು ಅವರ ಹೆಸರಿನಲ್ಲಿರುವ ” ಅತೀ ದೀರ್ಘಕಾಲ ಆಳಿದ ಮುಖ್ಯಮಂತ್ರಿ” ಎಂಬ ದಾಖಲೆಯನ್ನು 2019ರಲ್ಲಿ ಮುರಿಯಬಲ್ಲರು?
1. ಮಣಿಪುರ
2. ಮಿಝೋರಾಮ
3 ಸಿಕ್ಕಿಂ. ◆◆
4 ಆಸ್ಸಾಮ್

19. ನವಮಣಿಗಳು ಯಾರ ಆಸ್ಥಾನದಲ್ಲಿದ್ದರು?
1. ಅಕ್ಬರ್.●●
2. ಚಂದ್ರಗುಪ್ತ.
3. ಶಿವಾಜಿ.
4. ಕೃಷ್ಣದೇವರಾಯ.

20. ಸರ್ವೋಚ್ಛ ನ್ಯಾಯಾಲಯ ದಿನವನ್ನು ಎಂದು ಆಚರಿಸುತ್ತಾರೆ?
1. ಅಗಷ್ಟ್ 15.
2. ಅಗಷ್ಟ್ 20.
3. ಜನೆವರಿ 26.
4. ಜನೆವರಿ 28.■■

21. ಅಂತರರಾಷ್ಟ್ರೀಯ ಮಹಿಳಾ ದಿನ ಆಚರಿಸಲ್ಪಡುವುದು _
1. ಮಾರ್ಚ 08.■■
2. ಡಿಸೆಂಬರ್ 10.
3. ಅಗಷ್ಟ 16.
4. ಜುಲೈ 11.

22. ಅಂತರರಾಷ್ಟ್ರೀಯ ಅಹಿಂಸಾ ದಿನವನ್ನು ಯಾವ ದಿನದಂದು ಆಚರಿಸುತ್ತಾರೆ?
1. ಅಕ್ಟೋಬರ್ 24.
2. ಅಕ್ಟೋಬರ್ 02.■■
3. ನವೆಂಬರ್ 29.
4. ಯಾವುದು ಅಲ್ಲ.

23. ಡಿಸೆಂಬರ್ 23, ರೈತರ ದಿನವನ್ನು ಯಾವ ಪ್ರಧಾನಿಯ ಹುಟ್ಟು ಹಬ್ಬದ ಸವಿನೆನಪಿಗಾಗಿ ಆಚರಿಸಲಾಗುತ್ತದೆ?
1. ಲಾಲ್ ಬಹದ್ದೂರ್ ಶಾಸ್ತ್ರೀ.
2. ಚರಣಸಿಂಗ್.■■
3. ಅಟಲ್ ಬಿಹಾರಿ ವಾಜಪೇಯಿ.
4. ರಾಜೀವಗಾಂಧಿ.

24. ದಂಡಿ ಸತ್ಯಾಗ್ರಹ ದಿನ ಆಚರಿಸಲ್ಪಡುವುದು ____ ರಂದು.
1. ಮಾರ್ಚ 08.
2. ಮಾರ್ಚ 10.
3. ಮಾರ್ಚ 12.■■
4. ಯಾವುದು ಅಲ್ಲ.

25. ಅಂತರರಾಷ್ಟ್ರೀಯ ರೆಡ್ ಕ್ರಾಸ್ ದಿನ ಆಚರಿಸಲ್ಪಡುವುದು.
1. ಮೇ 08.■■
2. ಫೆಬ್ರವರಿ 28.
3. ಜುಲೈ 01.
4. ಯಾವುದು ಅಲ್ಲ.

26. ಈ ಕೆಳಕಂಡ ಯಾವ ಕ್ರೀಡಾಪಟುವಿನ ಜನ್ಮ ದಿನದ ಸವಿ ನೆನಪಿಗಾಗಿ ಅಗಷ್ಟ್ 29 ನ್ನು ರಾಷ್ಟ್ರೀಯ ಕ್ರೀಡಾ ದಿನವಾಗಿ ಆಚರಿಸುತ್ತಾರೆ?
1. ಧನರಾಜ ಪಿಳ್ಳೈ.
2. ಸಚಿನ ತೆಂಡೂಲ್ಕರ್.
3. ಧ್ಯಾನಚಂದ್.■■
4. ಕಪಿಲದೇವ್.

27. ವಿಶ್ವ ಓಝೋನ್ ದಿನ ಯಾವ ದಿನದಂದು ಆಚರಿಸಲ್ಪಡುವುದು?
1. ಸೆಪ್ಟೆಂಬರ್ 15.
2. ಸೆಪ್ಟೆಂಬರ್ 16.■■
3. ಸೆಪ್ಟೆಂಬರ್ 26.
4. ಮೇಲಿನ ಯಾವುದು ಅಲ್ಲ.

28. ವಿಶ್ವಸಂಸ್ಥೆಯ ಸಾಮಾನ್ಯ ಸಭೆಯು ಅಂತರರಾಷ್ಟ್ರೀಯ ಅಹಿಂಸಾ ದಿನವನ್ನು ಯಾವ ವರ್ಷದಿಂದ ಆರಂಭಿಸಿದೆ?
1. 2005.
2. 2007.■■
3. 2009.
4. 2011.
💦💦💦💦💦💦

Food park of karnataka


see now

ಭಾನುವಾರ, ಮಾರ್ಚ್ 28, 2021

RTO INFORMATION

*ವಾಹನ ಸಂಖ್ಯೆ ಯಾವ ಜಿಲ್ಲೆಯದ್ದು ಅಂತ ತಿಳ್ಕೊಳೋದು ಗೊತ್ತಾ.. ಗೊತ್ತಿರ್ಲಿಲ್ಲ ಅಂದ್ರೆ ತಿಳ್ಕೊಳ್ಳಿ*

KA-01 ಬೆಂಗಳೂರು ಕೇಂದ್ರ , ಕೋರಮಂಗಲ
KA-02 ಬೆಂಗಳೂರು ಪಶ್ಚಿಮ, ರಾಜಾಜಿನಗರ
KA-03 ಬೆಂಗಳೂರು ಪೂರ್ವ, ಇಂದಿರಾನಗರ
KA-04 ಬೆಂಗಳೂರು ಉತ್ತರ, ಯಶವಂತಪುರ
KA-05 ಬೆಂಗಳೂರು ದಕ್ಷಿಣ, ಜಯನಗರ 4th ಬ್ಲಾಕ್
KA-06 ತುಮಕೂರು
KA-07 ಕೋಲಾರ
KA-08 ಕೋಲಾರ್ ಗೋಲ್ಡ್ ಫೀಲ್ಡ್ಸ್ (KGF)
KA-09 ಮೈಸೂರು ಪಶ್ಚಿಮ
KA-10 ಚಾಮರಾಜ್ನಗರ
KA-11 ಮಂಡ್ಯ
KA-12 ಮಡಿಕೇರಿ
KA-13 ಹಾಸನ
KA-14 ಶಿವಮೊಗ್ಗ
KA-15 ಸಾಗರ
KA-16 ಚಿತ್ರದುರ್ಗ
KA-17 ದಾವಣಗೆರೆ
KA-18 ಚಿಕ್ಕಮಗಳೂರು
KA-19 ಮಂಗಳೂರು (ಕುಡ್ಲ )
KA-20 ಉಡುಪಿ
KA-21 ಪುತ್ತೂರು
KA-22 ಬೆಳಗಾವಿ
KA-23 ಚಿಕ್ಕೋಡಿ
KA-24 ಬೈಲಹೊಂಗಲ್
KA-25 ಧಾರವಾಡ
KA-26 ಗದಗ
KA-27 ಹಾವೇರಿ
KA-28 ವಿಜಯಪುರ
KA-29 ಬಾಗಲಕೋಟೆ
KA-30 ಕಾರವಾರ
KA-31 ಸಿರ್ಸಿ
KA-32 ಕಲಬುರಗಿ
KA-33 ಯಾದಾಗಿರ
KA-34 ಬಳ್ಳಾರಿ
KA-35 ಹೊಸಪೇಟೆ
KA-36 ರಾಯಚೂರು
KA-37 ಕೊಪ್ಪಳ
KA-38 ಬೀದರ
KA-39 ಭಾಲ್ಕಿ
KA-40 ಚಿಕ್ಕಬಳ್ಳಾಪುರ
KA-41 ಬೆಂಗಳೂರು ವೆಸ್ಟೆರ್ನ್ ಸುಬುರ್ಬ್ಸ್: ಕೆಂಗೇರಿ
KA-42 ರಾಮನಗರ
KA-43 ದೇವನಹಳಿ – ಕೆಂಪೇಗೌಡ ಅಂತರಾಷ್ಟ್ರಿಯ ವಿಮಾನ ನಿಲ್ದಾಣ, ಬೆಂಗಳೂರು ಗ್ರಾಮೀಣ ಜಿಲ್ಲೆ
KA-44 ತಿಪಟೂರು, ತುಮಕೂರು ಜಿಲ್ಲೆ
KA-45 ಹುಣಸೂರು , ಮೈಸೂರು ಜಿಲ್ಲೆ
KA-46 ಸಕ್ಲೇಶಪುರ , ಹಾಸನ ಜಿಲ್ಲೆ
KA-47 ಹೊನ್ನಾವರ
KA-48 ಜಮಖಂಡಿ
KA-49 ಗೋಕಾಕ
KA-50 ಬೆಂಗಳೂರು, ಯೆಲಹಂಕ
KA-51 ಬೆಂಗಳೂರು, ಎಲೆಕ್ಟ್ರಾನಿಕ್ಸ್ ಸಿಟಿ (BTM 4th Stage)
KA-52 ನೆಲಮಂಗಲ, ಬೆಂಗಳೂರು ಗ್ರಾಮೀಣ ಜಿಲ್ಲೆ
KA-53 ಬೆಂಗಳೂರು, ಕೃಷ್ಣರಾಜಪುರಂ
KA-54 ನಾಗಮಂಗಲ
KA-55 ಮೈಸೂರು ಪೂರ್ವ
KA-56 ಬಸವಕಲ್ಯಾಣ
KA-57 ಶಾಂತಿನಗರ, ಬೆಂಗಳೂರು ನಗರ ಜಿಲ್ಲೆ
KA-59 ಚಾಮರಾಜಪೇಟೆ, ಬೆಂಗಳೂರು ನಗರ ಜಿಲ್ಲೆ
KA-60 R.T. ನಗರ, ಬೆಂಗಳೂರು ಬೆಂಗಳೂರು ನಗರ ಜಿಲ್ಲೆ
KA-61 ಮ್ಯಾರಥಹಳ್ಳಿ, ಬೆಂಗಳೂರು ನಗರ ಜಿಲ್ಲೆ
KA-62 ಸುರತ್ಕಲ್, ಮಂಗಳೂರು ಜಿಲ್ಲೆ
KA-63 ಹುಬ್ಬಳ್ಳಿ
KA-64 ಮಧುಗಿರಿ, ತುಮಕೂರು ಜಿಲ್ಲೆ
KA-65 ದಾಂಡೇಲಿ
KA-66 ತರೀಕೆರೆ
*_KA_ -67 ಚಿಂತಾಮಣಿ*
KA~68 ರಾಣೆಬೆನ್ನೂರ
KA~69 ರಾಮದುರ್ಗ
KA~70 ಬಂಟ್ವಾಳ...
KA--71 ಅಥಣಿ


ಗುರುವಾರ, ಮಾರ್ಚ್ 25, 2021

Karnataka

ಕರ್ನಾಟಕ ರಾಜ್ಯದ ಚಿಹ್ನೆಗಳು
ಭಾಷೆಕನ್ನಡ
ಚಿಹ್ನೆಗಂಡಬೇರುಂಡ
ನಾಡಗೀತೆಜಯ ಭಾರತ ಜನನಿಯ ತನುಜಾತೆ ಕವಿ:ಕುವೆಂಪು
  • ಭಾರತದ ಸ್ವಾತಂತ್ರ್ಯದ ನಂತರ ಮೈಸೂರು ಸಂಸ್ಥಾನ ಭಾರತದ ಒಕ್ಕೂಟವನ್ನು ಸೇರಿತು. ಮೈಸೂರು ಮಹಾರಾಜರಾದ ಜಯಚಾಮರಾಜೇಂದ್ರ ಒಡೆಯರ್ "ರಾಜಪ್ರಮುಖ"ರಾದರು. ಒಡೆಯರ ಮನೆತನಕ್ಕೆ ಭಾರತ ಸರ್ಕಾರದಿಂದ ಗೌರವಧನ ೧೯೭೫ರ ವರೆಗೆ ಸಂದಾಯವಾಗುತ್ತಿತ್ತು. ಈ ಮನೆತನದ ಸದಸ್ಯರು ಈಗಲೂ ಮೈಸೂರು ಅರಮನೆಯ ಒಂದು ಭಾಗದಲ್ಲಿ ಇದ್ದಾರೆ.
  • ಏಕೀಕರಣ ಚಳವಳಿಯ ಬಹುಕಾಲದ ಬೇಡಿಕೆಯ ಮೇರೆಗೆ ನವೆಂಬರ್ ೧೧೯೫೬ ರಂದು ರಾಜ್ಯ ಪುನಸ್ಸಂಘಟನಾ ಕಾಯಿದೆಗೆ ಅನುಸಾರವಾಗಿ ಮೈಸೂರು ರಾಜ್ಯಕ್ಕೆ ಕೊಡಗು ರಾಜ್ಯ ಹಾಗೂ ಸುತ್ತಲ ಮದರಾಸುಹೈದರಾಬಾದ್, ಮತ್ತು ಬಾಂಬೆ ರಾಜ್ಯಗಳ ಕನ್ನಡ-ಪ್ರಧಾನ ಪ್ರದೇಶಗಳು ಸೇರಿ ಏಕೀಕೃತ "ವಿಶಾಲ ಮೈಸೂರು" ಅಸ್ತಿತ್ವಕ್ಕೆ ಬಂದಿತು (ಬಳ್ಳಾರಿ ಜಿಲ್ಲೆ ೧೯೫೩ರಲ್ಲಾಗಲೆ ರಾಜ್ಯಕ್ಕೆ ಸೇರಿತ್ತು). ನವೆಂಬರ್ ೧೧೯೭೩ ರಲ್ಲಿ ರಾಜ್ಯದ ಹೆಸರನ್ನು ಕರ್ನಾಟಕ ಎಂದು ಬದಲಾಯಿಸಲಾಯಿತು.

ಭೌಗೋಳಿಕಸಂಪಾದಿಸಿ

ಮೂರು ಭೌಗೋಳಿಕ ಪ್ರದೇಶಗಳುಸಂಪಾದಿಸಿ

  1. ಕರಾವಳಿ ಕರ್ನಾಟಕ – ಪಶ್ಚಿಮ ಘಟ್ಟಗಳು ಮತ್ತು ಅರಬ್ಬೀ ಸಮುದ್ರದ ನಡುವೆ ಇರುವ ತಗ್ಗಿನ ಪ್ರದೇಶ, ಸಾಕಷ್ಟು ಮಳೆ ಪಡೆಯುತ್ತದೆ.
  2. ಮಲೆನಾಡು – ಪಶ್ಚಿಮ ಘಟ್ಟಗಳು, ಅರಬ್ಬೀ ಸಮುದ್ರದ ತೀರದೊಂದಿಗೆ ಸಾಗುವ ಪರ್ವತ ಸರಣಿ, ಸರಾಸರಿ ಸಮುದ್ರ ಮಟ್ಟದಿಂದ ೯೦೦ ಮೀ. ಎತ್ತರದಲ್ಲಿದೆ. ಇಲ್ಲೂ ಸಹ ಸಾಕಷ್ಟು ಮಳೆ ಆಗುತ್ತದೆ.
  3. ಬಯಲುಸೀಮೆ – ದಖ್ಖನ್ ಪ್ರಸ್ಥ ಭೂಮಿ (ಅಥವಾ ದಕ್ಷಿಣ ಪ್ರಸ್ಥಭೂಮಿ), ರಾಜ್ಯದ ಒಳನಾಡು, ಮಳೆ ಕಡಿಮೆ ಇರುವ ಪ್ರದೇಶ.

ಕರ್ನಾಟಕದ ಜಲಾನಯನ ಪ್ರದೇಶಗಳುಸಂಪಾದಿಸಿ

  • ಕರ್ನಾಟಕದ ಬಯಲು ಪ್ರದೇಶದ ಉತ್ತರ ಭಾಗವು ಭಾರತದ ಎರಡನೆಯ ಅತಿ ದೊಡ್ಡ ಶುಷ್ಕ ಪ್ರದೇಶವಾಗಿದೆ. ಕರ್ನಾಟಕದ ಎತ್ತರದ ತುದಿಯು ಚಿಕ್ಕಮಗಳೂರು ಜಿಲ್ಲೆಯ ಮುಳ್ಳಯ್ಯನಗಿರಿ ಬೆಟ್ಟವಾಗಿದೆ (ಎತ್ತರ ೧೯೨೯ ಮೀ. (೬೩೨೯ ಅಡಿಗಳು)) ಕರ್ನಾಟಕದಲ್ಲಿ ಏಳು ಜಲಾನಯನ ಪ್ರದೇಶಗಳಿವೆ (river basin).[೯] ಅವುಗಳೆಂದರೆ:
  1. ಕೃಷ್ಣಾ ಜಲಾನಯನ ಪ್ರದೇಶ: ರಾಜ್ಯದ ಉತ್ತರ ಭಾಗದಲ್ಲಿರುವ ಕೃಷ್ಣಾನದಿಯ ಜಲಾನಯನ ಪ್ರದೇಶದಲ್ಲಿ ಪ್ರಧಾನ ಉಪನದಿಗಳಾದ ತುಂಗಭದ್ರಾಮಲಪ್ರಭಾಘಟಪ್ರಭಾಭೀಮಾ ನದಿಗಳು ಹರಿಯುತ್ತವೆ.
  2. ಕಾವೇರಿ ಜಲಾನಯನ ಪ್ರದೇಶ: ದಕ್ಷಿಣದ ಕಾವೇರಿ ಜಲಾನಯನ ಪ್ರದೇಶದಲ್ಲಿ ಪ್ರಧಾನ ಉಪನದಿಗಳಾದ ಹಾರಂಗಿಹೇಮಾವತಿಕಬಿನಿಸುವರ್ಣಾವತಿಲಕ್ಷ್ಮಣ ತೀರ್ಥಶಿಂಶಾಅರ್ಕಾವತಿ ನದಿಗಳು ಹರಿಯುತ್ತವೆ.
  3. ಗೋದಾವರಿ ಜಲಾನಯನ ಪ್ರದೇಶ: ಗೋದಾವರಿ ಜಲಾನಯನ ಪ್ರದೇಶದಲ್ಲಿ ಪ್ರಧಾನ ಉಪನದಿಯಾದ ಮಂಜೀರಾ ನದಿ ಹರಿಯುತ್ತದೆ.
  4. ಪಶ್ಚಿಮಕ್ಕೆ ಹರಿಯುವ ನದಿಗಳ ಜಲಾನಯನ ಪ್ರದೇಶ: ಈ ಪ್ರದೇಶದಲ್ಲಿ ಮಾಂಡವಿಕಾಳಿಗಂಗಾವಲ್ಲಿಅಘನಾಶಿನಿಶರಾವತಿಚಕ್ರಾವಾರಾಹಿನೇತ್ರಾವತಿ, ಬಾರಾಪೋಲ್ ನದಿಗಳು ಹರಿಯುತ್ತವೆ.
  5. ಉತ್ತರ ಪಿನಾಕಿನಿ ಜಲಾನಯನ ಪ್ರದೇಶ.
  6. ದಕ್ಷಿಣ ಪಿನಾಕಿನಿ ಜಲಾನಯನ ಪ್ರದೇಶ.
  7. ಪಾಲಾರ್ ಜಲಾನಯನ ಪ್ರದೇಶ.
 
Karnataka region wise

ಕರ್ನಾಟಕದಲ್ಲಿ ೫ ಪ್ರದೇಶಗಳುಸಂಪಾದಿಸಿ

  1. ವಾಯುವ್ಯ ಕರ್ನಾಟಕ(ವಿಜಯಪುರಬಾಗಲಕೋಟಗದಗಧಾರವಾಡಹಾವೇರಿಬೆಳಗಾವಿಉತ್ತರ ಕನ್ನಡ)
  2. ಈಶಾನ್ಯ ಕರ್ನಾಟಕ (ಕಲಬುರಗಿಬೀದರ್ಯಾದಗಿರಿಕೊಪ್ಪಳರಾಯಚೂರುಬಳ್ಳಾರಿ)
  3. ಹಳೇ ಮೈಸೂರು (ಮೈಸೂರುರಾಮನಗರಮಂಡ್ಯಚಾಮರಾಜನಗರಕೋಲಾರಚಿಕ್ಕಬಳ್ಳಾಪುರಹಾಸನಚಿಕ್ಕಮಗಳೂರುಶಿವಮೊಗ್ಗ ತುಮಕೂರುಚಿತ್ರದುರ್ಗ,ದಾವಣಗೆರೆಬೆಂಗಳೂರುಬೆಂಗಳೂರು ಗ್ರಾಮಾಂತರ)
  4. ತುಳುನಾಡು (ಉಡುಪಿದಕ್ಷಿಣ ಕನ್ನಡ)
  5. ಕೊಡಗು (ಮಡಿಕೇರಿ)

ವಾಯುವ್ಯ ಕರ್ನಾಟಕದ ಎಲ್ಲ ಜಿಲ್ಲೆಗಳು ಬಾಂಬೆ ರಾಜ್ಯದಿಂದ ಬೇರ್ಪಟ್ಟು ಮೈಸೂರು ರಾಜ್ಯಕ್ಕೆ ಸೇರ್ಪಡೆಗೊಂಡಿದ್ದರೆ ಈಶಾನ್ಯ ಕರ್ನಾಟಕದ ಬಹುತೇಕ ಜಿಲ್ಲೆಗಳು ಹೈದರಾಬಾದ್ ರಾಜ್ಯದಿಂದ ಬೇರ್ಪಟ್ಟು ಮೈಸೂರು ರಾಜ್ಯಕ್ಕೆ ಸೇರ್ಪಡೆಗೊಂಡಿವೆ, ತುಳುನಾಡಿನ ಜಿಲ್ಲೆಗಳು ಮದ್ರಾಸ್ ರಾಜ್ಯದಿಂದ ಬೇರ್ಪಟ್ಟು ಮೈಸೂರು ರಾಜ್ಯಕ್ಕೆ ಸೇರ್ಪಡೆಗೊಂಡಿದ್ದರೆ ಕೊಡಗು ಪ್ರತ್ಯೇಕ ರಾಜ್ಯವಾಗಿತ್ತು. 1956 ರಲ್ಲಿ ಬಾಂಬೆ, ಹೈದರಾಬಾದ್, ಮದ್ರಾಸ್ ರಾಜ್ಯಗಳಿಂದ ಬೇರ್ಪಟ್ಟ ಜಿಲ್ಲೆಗಳು ಹಾಗೂ ಕೊಡಗು, ಮೈಸೂರು ರಾಜ್ಯಕ್ಕೆ ಸೇರಿಕೊಂಡು ವಿಶಾಲ ಮೈಸೂರು ರಾಜ್ಯ ಉದಾಯವಾಯಿತು. ಹಾಗೂ ಕಾಲಾನಂತರದಲ್ಲಿ ಮೈಸೂರು ರಾಜ್ಯ ಕರ್ನಾಟಕವಾಯಿತು.

ಪ್ರದೇಶವಾರು ಜಿಲ್ಲೆಗಳ ವಿಸ್ತೀರ್ಣ[೧೦]ಸಂಪಾದಿಸಿ

ಈಶಾನ್ಯ ಕರ್ನಾಟಕ:

ವಾಯುವ್ಯ ಕರ್ನಾಟಕ:

ಹಳೇ ಮೈಸೂರು:

ತುಳುನಾಡು:

ಕೊಡಗು:

  • ಕೊಡಗು ವಿಸ್ತೀರ್ಣ: ೪೧೦೨ ಚ. ಕಿಮಿ

ಕರ್ನಾಟಕದ ಭೂರಚನೆಗಳುಸಂಪಾದಿಸಿ

  1. ಧಾರವಾಡದ ಶೀಸ್ಟಗಳು (ಪದರು ಶಿಲೆ) ಮತ್ತು ಪೆಡಸುಕಲ್ಲಿನ (ಗ್ರಾನೈಟ್) ನಯಿಸ್ (gneiss) ಗಳಿಂದ ಮಾಡಲ್ಪಟ್ಟ ಆರ್ಕಿಯನ್ ಸಂಕೀರ್ಣ.
  2. ಕಲಡ್ಗಿ ಮತ್ತು ಭೀಮಾ ಸರಣಿಯ ಪ್ರೊಟೆರೋಜೋಯಿಕ್ ಅವಶೇಷ ರಹಿತ ಪದರು ರಚನೆಗಳು.
  3. ದಖನ್ ಟ್ರ್ಯಾಪ್ಪಿಯನ್ ಮತ್ತು ಇಂಟರ್-ಟ್ರ್ಯಾಪ್ಪಿಯನ್ ನಿಕ್ಷೇಪಗಳು.
  4. ಭೂರಚನೆಯ ತೃತೀಯ ಅವಧಿಯ ಹಾಗು ಇತ್ತೀಚಿನ ಲ್ಯಾಟರೈಟ್ ಗಳು ಮತ್ತು ಮೆಕ್ಕಲು ಮಣ್ಣಿನ ನಿಕ್ಷೇಪಗಳು.

ರಾಜ್ಯದ ೬೦% ಭಾಗ ನಯಿಸ್ (gneiss) ಗಳು, ಪೆಡಸುಕಲ್ಲುಗಳು (ಗ್ರಾನೈಟ್) ಹಾಗು ಚಾರ್ನೊಕೈಟ್ ಬಂಡೆಗಳಿಂದ ಕೂಡಿರುವ ಆರ್ಕಿಯನ್ ಸಂಕೀರ್ಣದಿಂದ ಆವೃತವಾಗಿದೆ. ಭೂರಚನೆಯ ತೃತೀಯ ಅವಧಿಯ ಆದಿಯಲ್ಲಿ ಜ್ವಾಲಾಮುಖಿ ಚಟುವಟಿಕೆಯ ನಿಲುಗಡೆಯ ನಂತರ ನಿರ್ಮಾಣ ವಾದ ಲ್ಯಾಟರೈಟ್ ಹೊದಿಕೆಗಳನ್ನು ದಖನ್ ಟ್ರ್ಯಾಪ್ಸಲ್ಲಿರುವ ಹಲವು ಜಿಲ್ಲೆಗಳಲ್ಲಿ ಕಾಣಬಹುದು.

ಹನ್ನೊಂದು ರೀತಿಯ ಮಣ್ಣಿನ ವ್ಯವಸ್ಥೆಗಳುಸಂಪಾದಿಸಿ

  • ಕರ್ನಾಟಕದಲ್ಲಿ ಹನ್ನೊಂದು ರೀತಿಯ ಮಣ್ಣಿನ ವ್ಯವಸ್ಥೆಗಳಿವೆ:
  1. ಎಂಟಿಸೊಲ್ಸ್,
  2. ಇನ್ಸೆಪ್ಟಿಸೊಲ್ಸ್,
  3. ಮೊಲ್ಲಿಸೊಲ್ಸ್,
  4. ಸ್ಪೊಡೊಸೊಲ್ಸ್,
  5. ಅಲ್ಫಿಸೊಲ್ಸ್,
  6. ಅಲ್ಟಿಸೊಲ್ಸ್,
  7. ಆಕ್ಸಿಸೊಲ್ಸ್,
  8. ಅರಿಡಿಸೊಲ್ಸ್,
  9. ವರ್ಟಿಸೊಲ್ಸ್,
  10. ಆಂಡಿಸೊಲ್ಸ್ ಮತ್ತು
  11. ಹಿಸ್ಟೊಸೊಲ್ಸ್.

ಕರ್ನಾಟಕದ ಮಣ್ಣಿನ ಪ್ರಕಾರಗಳುಸಂಪಾದಿಸಿ

ಕೃಷಿ ಸಾಮರ್ಥ್ಯದ ಆಧಾರದ ಮೇಲೆ ಕರ್ನಾಟಕದಲ್ಲಿರುವ ಮಣ್ಣನ್ನು ಆರು ಪ್ರಕಾರಗಳಾಗಿ ವಿಂಗಡಿಸಬಹುದು:

  1. ಕೆಂಪು ಮಣ್ಣು,
  2. ಜೇಡಿ ಮಣ್ಣು,
  3. ಕಪ್ಪು ಮಣ್ಣು,
  4. ಮೆಕ್ಕಲು ಮಣ್ಣು,
  5. ಅರಣ್ಯ ಮಣ್ಣು ಮತ್ತು
  6. ಕರಾವಳಿ ಮಣ್ಣು.

ಕರ್ನಾಟಕ ನಾಲ್ಕು ಋತುಗಳುಸಂಪಾದಿಸಿ

  • ಕರ್ನಾಟಕ ನಾಲ್ಕು ಋತುಗಳನ್ನು ಅನುಭವಿಸುತ್ತದೆ.
  1. ಜನವರಿ ಮತ್ತು ಫೆಬ್ರವರಿಯಲ್ಲಿ ಚಳಿಗಾಲ,
  2. ಮಾರ್ಚ್ ಮತ್ತು ಮೇಯಲ್ಲಿ ಬೇಸಿಗೆ ಕಾಲ,
  3. ಜೂನ್ ನಿಂದ ಸೆಪ್ಟೆಂಬರ್ ವರೆಗೆ ವರ್ಷಾಕಾಲ ಹಾಗು
  4. ಅಕ್ಟೋಬರ್ ನಿಂದ ಡಿಸೆಂಬರ್ ವರೆಗೆ ವರ್ಷೋತ್ತರ ಕಾಲ.

ಕರ್ನಾಟಕದ ಮೂರು ವಲಯಗಳುಸಂಪಾದಿಸಿ

  • ಹವಾಮಾನದ ಆಧಾರದ ಮೇಲೆ ಕರ್ನಾಟಕವನ್ನು ಮೂರು ವಲಯಗಳಾಗಿ ವಿಂಗಡಿಸಬಹುದು:
  1. ಕರಾವಳಿ,
  2. ಉತ್ತರ ಒಳನಾಡು ಹಾಗು,
  3. ದಕ್ಷಿಣ ಒಳನಾಡು. ಇವುಗಳಲ್ಲಿ ಕರಾವಳಿ ವಲಯವು ಅತಿ ಹೆಚ್ಚು ಮಳೆಯನ್ನು ಪಡೆಯುತ್ತದೆ. ಕರಾವಳಿ ವಲಯದ ವಾರ್ಷಿಕ ಸರಾಸರಿ ಮಳೆ ೩೬೩೮.೫ಮಿಲಿಮೀಟರ್ (೧೪೩ ಅಂಗುಲ) ರಾಜ್ಯದ ವಾರ್ಷಿಕ ಸರಾಸರಿ ಮಳೆ ೧೧೩೯ಮಿಲಿಮೀಟರ್ (೪೫ ಅಂಗುಲ)ಗಿಂತ ತುಂಬ ಜಾಸ್ತಿಯಿದೆ.

ಹವಾಮಾನಸಂಪಾದಿಸಿ

  • ಕರ್ನಾಟಕದ ಅತಿ ಹೆಚ್ಚು ತಾಪಮಾನವಾದ ೪೫.೬°C (೧೧೪ °F) ರಾಯಚೂರಿನಲ್ಲಿ ದಾಖಲಾಯಿತು.
  • ಕರ್ನಾಟಕದ ಅತಿ ಕಡಿಮೆ ತಾಪಮಾನವಾದ ೨.೮°C (೩೭ °F) ಬೀದರಿನಲ್ಲಿ ದಾಖಲಾಯಿತು.
  • ಕರ್ನಾಟಕದ ಸುಮಾರು ೩೮,೭೨೪ ಚ.ಕಿಮೀ. (೧೪,೯೫೧ ಚ.ಮೈ) ಪ್ರದೇಶವು ಅರಣ್ಯದಿಂದ ಆವೃತವಾಗಿದೆ.
  • ಕರ್ನಾಟಕದ ಅರಣ್ಯ ಪ್ರದೇಶದ ಶೇಕಡಾವಾರು ಸಮಸ್ತ ಭಾರತದ ಸರಾಸರಿಯಾದ ೨೩%ಗಿಂತ ಸ್ವಲ್ಪ ಕಡಿಮೆಯಿದೆ ಹಾಗು ರಾಷ್ಟ್ರೀಯ ಅರಣ್ಯ ನೀತಿಯಲ್ಲಿ ವಿಧಿಸಲಾದ ೩೩%ಗಿಂತ ಗಮನಾರ್ಹವಾಗಿ ಕಡಿಮೆಯಿದೆ.

ಕರ್ನಾಟಕದಲ್ಲಿ ಮಳೆಸಂಪಾದಿಸಿ

ಜಿಲ್ಲಾಜಿಲ್ಲಾ ಸರಾಸರಿ ವಾರ್ಷಿಕ ಮಳೆ (ಮಿಮೀ)
ಬೆಂಗಳೂರು ನಗರ978
ಬೆಂಗಳೂರು ಗ್ರಾಮೀಣ885
ಚಿತ್ರದುರ್ಗ573
ದಾವಣಗೆರೆ700
ಕೋಲಾರ744
ಶಿವಮೊಗ್ಗಾ1813
ತುಮಕೂರು688
ಬಾಗಲಕೋಟೆ562
ಬೆಳಗಾವಿ808
ವಿಜಾಪುರ578
ಧಾರವಾಡ772
ಗದಗ612
ಹಾವೇರಿ753
ಉತ್ತರ ಕನ್ನಡ2835
ಬಳ್ಳಾರಿ636
ಬೀದರ್847
ಗುಲ್ಬರ್ಗಾ777
ಕೊಪ್ಪಳ572
ರಾಯಚೂರು621
ಚಾಮರಾಜನಗರ751
ಚಿಕ್ಕಮಗಳೂರು1925
ದಕ್ಷಿಣ ಕನ್ನಡ3975
ಹಾಸನ1031
ಕೊಡಗು2718
ಮಂಡ್ಯ806
ಮೈಸೂರು798
ಉಡುಪಿ4119[೧೧]

ಜಿಲ್ಲೆಗಳು [೧]ಸಂಪಾದಿಸಿ

http://www.mrc.gov.in/sites/all/themes/nexus/images/slideshows/Maps_en/Karnataka_State_En.png

1956 ರಲ್ಲಿ ವಿಶಾಲ ಮೈಸೂರು
ಕರ್ನಾಟಕದ ಪ್ರಮುಖ ಸ್ಥಳಗಳನ್ನು ಸಂಪರ್ಕಿಸುವ ಭಾರತೀಯ ರೈಲು ಮಾರ್ಗ

ಒಟ್ಟು ೩೦ ಜಿಲ್ಲೆಗಳು

  • ಪ್ರತಿಯೊಂದು ಜಿಲ್ಲೆಗೆ ಜಿಲ್ಲಾಧಿಕಾರಿ ಇರುತ್ತಾರೆ. ಸಹಾಯಕ ಕಮಿಷನರ್, ತಹಸೀಲುದಾರ, ಶಿರಸ್ತೆದಾರ/ಸಹಾಯಕ ತಹಸೀಲುದಾರ, ಕಂದಾಯ ಪರಿಶೀಲನಾಧಿಕಾರಿ, ಗ್ರಾಮ ಲೆಕ್ಕಿಗ ಮೊದಲಾದ ಹಲವು ಅಧಿಕಾರಿಗಳು ಜಿಲ್ಲಾಧಿಕಾರಿಗೆ ನೆರವಾಗಲು ಜಿಲ್ಲಾ ಮಟ್ಟದಲ್ಲಿ ಮತ್ತು ತಾಲೂಕು ಮಟ್ಟದಲ್ಲಿ ಇರುತ್ತಾರೆ.[೧೨] ಜಿಲ್ಲೆಯನ್ನು ವಿಭಾಗಿಸಿ ತಾಲೂಕುಗಳನ್ನು ರಚಿಸಲಾಗಿದೆ. ತಾಲೂಕನ್ನು ವಿಭಾಗಿಸಿ ಗ್ರಾಮಗಳನ್ನು ರಚಿಸಲಾಗಿದೆ. ಜಿಲ್ಲಾಡಳಿತದಲ್ಲಿ ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್ ಗಳು, ಗ್ರಾಮ ಪಂಚಾಯತ್ ಗಳು, ನಗರಪಾಲಿಕೆಗಳು ಪಾಲ್ಗೊಳ್ಳುತ್ತವೆ.

ಜನಸಂಖ್ಯೆಸಂಪಾದಿಸಿ

  • 2011ರ ಜನಗಣತಿ ಪ್ರಕಾರ, ಕರ್ನಾಟಕದ ಜನಸಂಖ್ಯೆಯು 6,11,30,704 ಆಗಿದೆ ಹಾಗು ಇದರಲ್ಲಿ ಪುರುಷರ ಸಂಖ್ಯೆ 3,10,57,742 (50.80%) ಹಾಗು ಸ್ತೀಯರ ಸಂಖ್ಯೆ 3,00,72,962 (49.19%) ಅಂದರೆ ಪ್ರತಿ 1000 ಪುರುಷರಿಗೆ 968 ಸ್ತೀಯರು. 2001/2001ರ ಜನಸಂಖ್ಯೆಕ್ಕಿಂತ 2011/2011ರ ಜನಸಂಖ್ಯೆ 15.67%ರಷ್ಟು ಹೆಚ್ಚಿದೆ. ಜನಸಂಖ್ಯಾ ಸಾಂದ್ರತೆಯು 318.8/ಚ.ಕಿಮೀ.ರಷ್ಟಿದೆ ಹಾಗು ನಗರ ಪ್ರದೇಶಗಳಲ್ಲಿ 38.57% ರಷ್ಟು ಜನ ವಾಸಿಸುತ್ತಾರೆ.
  • ಸಾಕ್ಷರತೆಯು 75.6%ರಷ್ಟಿದೆ,ಇದರಲ್ಲಿ ಪುರುಷರ ಸಾಕ್ಷರತೆಯು 82.85% ಮತ್ತು ಸ್ತೀಯರ ಸಾಕ್ಷರತೆಯು 68.13%ರಷ್ಟಿದೆ. ಜನಸಂಖ್ಯೆಯ 83% ಹಿಂದುಗಳು, 11% ಮುಸಲ್ಮಾನರು, 4% ಕ್ರೈಸ್ತರು, 0.78% ಜೈನರು, 0.73% ಬೌದ್ಧರು ಮತ್ತು ಉಳಿದವರು ಅನ್ಯ ಧರ್ಮದವರು. ಕನ್ನಡವು ಕರ್ನಾಟಕದ ಆಡಳಿತ ಭಾಷೆಯಾಗಿದೆ ಹಾಗು ಸುಮಾರು 64.75%ರಷ್ಟು ಜನರ ಮಾತೃಭಾಷೆಯಾಗಿದೆ.
  • 1991ರಲ್ಲಿ ಕರ್ನಾಟಕದ ಭಾಷಾ ಅಲ್ಪಸಂಖ್ಯಾತರಲ್ಲಿ 9.72% ಉರ್ದು, 8.34% ತೆಲುಗು, 5.46% ತಮಿಳು, 3.95% ಮರಾಠಿ, 3.38% ತುಳು, 1.87% ಹಿಂದಿ, 1.78% ಕೊಂಕಣಿ, 1.69% ಮಲಯಾಳಂ ಮತ್ತು 0.25% ಕೊಡವ ತಕ್ ಮಾತಾಡುವ ಜನರಿದ್ದರು.ಕರ್ನಾಟಕದ ಜನನ ದರವು 19.9 (ಪ್ರತಿ ಸಾವಿರ ಜನರಿಗೆ), ಮೃತ್ಯು ದರವು 7.3 (ಪ್ರತಿ ಸಾವಿರ ಜನರಿಗೆ), ಶಿಶು ಮೃತ್ಯು ದರವು 47 (ಪ್ರತಿ ಸಾವಿರ ಜನನಗಳಿಗೆ), ಮಾತೃ ಮೃತ್ಯು (ಜನನ ಸಮಯದಲ್ಲಿ) ದರವು 213 (ಪ್ರತಿ ಲಕ್ಷ ಜನನಗಳಿಗೆ), ಒಟ್ಟು ಸಂತಾನ ದರವು (ಪ್ರತಿ ಮಹಿಳೆಗೆ ಅವಳ ಸಂತಾನೋತ್ಪತ್ತಿ ಕಾಲದಲ್ಲಿ ಹುಟ್ಟುವ ಮಕ್ಕಳ ಸಂಖ್ಯೆ) 2.1 ಆಗಿದೆ.[೧೩]
  • ಕಡೆಯ ಬಾರಿಗೆ ಇಂತಹ ಗಣತಿ ನಡೆದಿದ್ದು 2011ರಲ್ಲಿ. ಭಾರತದ ಒಟ್ಟು 4,37,06,512 (4.37 ಕೋಟಿ) ಜನ ತಮ್ಮ ಮಾತೃಭಾಷೆ ಕನ್ನಡ ಎಂದು ಹೇಳಿಕೊಳ್ಳುತ್ತಾರೆ ಎಂಬುದನ್ನು ಈ ಗಣತಿ ಕಂಡುಕೊಂಡಿತು. ತನ್ನನ್ನು ಹೊರತುಪಡಿಸಿಯೂ, ತನ್ನ ಮಾತೃಭಾಷೆಯೇ ‘ನಮ್ಮದು ಕೂಡ’ ಎಂದು ಹೇಳಿಕೊಳ್ಳುವವರ ಸಂಖ್ಯೆ 4.37 ಕೋಟಿಗಿಂತ ಹೆಚ್ಚು ಎಂಬುದು ಗೊತ್ತಾದಾಗ ಹೆಮ್ಮೆಯಾಗುವುದು ಸಹಜ. 2001ರ ಅಂಕಿ-ಅಂಶಗಳಿಗೆ ಹೋಲಿಸಿದರೆ ಕನ್ನಡ ಮಾತನಾಡುವವರ ಬೆಳವಣಿಗೆ ಪ್ರಮಾಣ ಶೇಕಡ 16ರಷ್ಟು (ನಿಖರವಾಗಿ ಹೇಳಬೇಕೆಂದರೆ, ಅದು ಶೇಕಡ 15.99ರಷ್ಟು). ಇದು ಕೂಡ ಮೇಲ್ನೋಟಕ್ಕೆ ಒಳ್ಳೆಯ ಚಿತ್ರಣವನ್ನೇ ನೀಡುತ್ತದೆ.

ಕನ್ನಡ ಮಾತನಾಡುವವರು ಎಂದು ಜನಗಣತಿ ನೀಡಿರುವ ಅಂಕಿ-ಅಂಶಗಳಲ್ಲಿ ಬಡಗ ಭಾಷಿಗರು (1,33,550 ಜನ), ಕುರುಂಬ ಭಾಷಿಗರು (24,189 ಜನ), "ಇತರ ಭಾಷಿಗರು" (30,244 ಜನ) ಕೂಡ ಸೇರಿದ್ದಾರೆ. ಹಾಗೆಯೇ, ಜನಗಣತಿಯು "ಪ್ರಾಕೃತ" (?) ಎಂದು ಕರೆದಿರುವ 12,257 ಜನ ಕೂಡ ಸೇರಿದ್ದಾರೆ. ಇವನ್ನೆಲ್ಲ ಪರಿಗಣಿಸಿದಾಗ, ಕನ್ನಡವನ್ನೇ ಮಾತನಾಡುವವರ ಸಂಖ್ಯೆ 4,35,06,272ಕ್ಕೆ (4.35 ಕೋಟಿ) ಇಳಿಯುತ್ತದೆ. [೧೪]

ಶಿಕ್ಷಣಸಂಪಾದಿಸಿ

  1. ಮೈಸೂರು ವಿಶ್ವವಿದ್ಯಾನಿಲಯಮೈಸೂರು
  2. ಕರ್ನಾಟಕ ವಿಶ್ವವಿದ್ಯಾಲಯಧಾರವಾಡ
  3. ಬೆಂಗಳೂರು ವಿಶ್ವವಿದ್ಯಾಲಯಬೆಂಗಳೂರು
  4. ಕೃಷಿ ವಿಶ್ವವಿದ್ಯಾಲಯ, ಧಾರವಾಡ
  5. ಕೃಷಿ ವಿಶ್ವವಿದ್ಯಾಲಯ, ರಾಯಚೂರು
  6. ಕೃಷಿ ವಿಶ್ವವಿದ್ಯಾಲಯ, ಬೆಂಗಳೂರು
  7. ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾನಿಲಯ, ಶಿವಮೊಗ್ಗ
  8. ತೋಟಗಾರಿಕೆ ವಿಶ್ವವಿದ್ಯಾಲಯ, ಬಾಗಲಕೋಟ
  9. ಗುಲ್ಬರ್ಗಾ ವಿಶ್ವವಿದ್ಯಾಲಯಗುಲ್ಬರ್ಗಾ
  10. ಮಂಗಳೂರು ವಿಶ್ವವಿದ್ಯಾಲಯಮಂಗಳೂರು
  11. ಕುವೆಂಪು ವಿಶ್ವವಿದ್ಯಾನಿಲಯಶಿವಮೊಗ್ಗ
  12. ಕನ್ನಡ ವಿಶ್ವವಿದ್ಯಾಲಯಹಂಪಿ
  13. ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ,ಮೈಸೂರು
  14. ತುಮಕೂರು ವಿಶ್ವವಿದ್ಯಾಲಯತುಮಕೂರು
  15. ರಾಜೀವ್ ಗಾಂಧಿ ವೈದ್ಯಕೀಯ ವಿಶ್ವವಿದ್ಯಾಲಯ, ಬೆಂಗಳೂರು
  16. ದಾವಣಗೆರೆ ವಿಶ್ವವಿದ್ಯಾಲಯ, ದಾವಣಗೆರೆ
  17. ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯಬೆಳಗಾವಿ
  18. ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯವಿಜಯಪುರ
  19. ಕರ್ನಾಟಕ ಪಶು ವೈದ್ಯಕೀಯ,ಮೀನುಗಾರಿಕೆ ವಿಶ್ವವಿದ್ಯಾನಿಲಯ, ಬೀದರ
  20. ಕರ್ನಾಟಕ ರಾಜ್ಯ ಸಂಗೀತ ವಿಶ್ವವಿದ್ಯಾಲಯ, ಮೈಸೂರು
  21. ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯ, ಹುಬ್ಬಳ್ಳಿ
  22. ಕರ್ನಾಟಕ ಜಾನಪದ ವಿಶ್ವವಿದ್ಯಾಲಯ, ಗೋಟಗೊಡಿ, ಹಾವೇರಿ ಜಿಲ್ಲೆ
  23. ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯ, ಬೆಂಗಳೂರು
  24. ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯ, ಬೆಳಗಾವಿ
  25. ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯ, ಬಳ್ಳಾರಿ
  26. ಗ್ರಾಮೀಣಾಭಿವೃದ್ಧಿ ವಿಶ್ವವಿದ್ಯಾಲಯ, ಗದಗ

ಕರ್ನಾಟಕದ ಆರ್ಥಿಕತೆಸಂಪಾದಿಸಿ

  • ಕರ್ನಾಟಕ ಭಾರತ ದೇಶದ ಅತ್ಯಂತ ವೇಗವಾಗಿ ಅಭಿವೃದ್ದಿ ಹೊಂದುತ್ತಿರುವ ರಾಜ್ಯ. ೨೦೦೮-೦೯ರ ಆರ್ಥಿಕ ಬೆಳವಣಿಗೆ ದರದ ಪ್ರಕಾರವಾಗಿ ರಾಜ್ಯದ ಅಭಿವೃದ್ದಿ ದರವು $೫೮.೨೩ರಷ್ಟಿದೆ ಎಂದು ಅಂದಾಜಿಸಲಾಗಿದೆ. ಹಾಗೆಯೇ ತಲಾದಾಯದಲ್ಲಿಯೂ ಅತ್ಯಂತ ವೇಗದ ಬೆಳವಣಿಗೆಯನ್ನು ಕಳೆದೊಂದು ದಶಕದಲ್ಲಿ ಕರ್ನಾಟಕ ರಾಜ್ಯ ದಾಖಲಿಸಿದೆ. ತಲಾದಾಯದ ಜಿಡಿಪಿ ಅಂಕಿ ಅಂಶಗಳ ಅನುಸಾರ ರಾಜ್ಯವು ದೇಶದ ರಾಜ್ಯಗಳಲ್ಲಿ ೬ ನೇ ಸ್ಥಾನದಲ್ಲಿದೆ.
  • ೨೦೦೬ರ ಸೆಪ್ಟೆಂಬರ್ ತಿಂಗಳವರೆಗೆ ಒಟ್ತು ೭೮,೦೯೭ ರೂಪಾಯಿಗಳ ವಿದೇಶಿ ಬಂಡವಾಳ ಹರಿದು ಬಂದಿರುತ್ತದೆ. ೨೦೦೪ರ ಅಂತ್ಯದ ವೇಳೆಗೆ ರಾಜ್ಯದ ನಿರುದ್ಯೋಗ ಪ್ರಮಾಣ ೪.೯೪% ರಷ್ಟಿದ್ದು ಇದೇ ವೇಳೆ ದೇಶದಲ್ಲಿನ ನಿರುದ್ಯೋಗದ ಪ್ರಮಾಣವು ೫.೯೯% ಇದ್ದುದು ಗಮನಾರ್ಹ ಅಂಶ. ಅದೇ ಸಮಯದಲ್ಲಿ ಕರ್ನಾಟಕದ ಹಣದುಬ್ಬರ ದರವೂ ಕೂಡ ರಾಷ್ತ್ರೀಯ ಹಣದುಬ್ಬರ ದರಕ್ಕಿಂತಲೂ ಕಡಿಮೆ ಯಾಗಿತ್ತು. ರಾಷ್ಟ್ರದ ಹಣದುಬ್ಬರ ಪ್ರಮಾಣ ೪.೭% ಇದ್ದರೆ, ರಾಜ್ಯದ ಹಣದುಬ್ಬರ ದರ ೪.೪% ಇತ್ತು.
  • ದೇಶದಲ್ಲಿನ ಬಡತನದ ಅಂದಾಜು ೨೭% ಆಗಿದ್ದರೆ ಕರ್ನಾಟಕದಲ್ಲಿ ಅದು ೧೭% ಆಗಿರುತ್ತದೆ. ರಾಜ್ಯದಲ್ಲಿ ಒಟ್ಟು ೫೬% ದಷ್ಟು ಮಂದಿ ಕೃಷಿಯಾಧಾರಿತ ಉದ್ಯೋಗಸ್ಥರಾಗಿದ್ದು ಒಟ್ತು ೧೨.೩೧ ಮಿಲಿಯನ್ ಹೆಕ್ಟೇರ್ ನಷ್ಟು ಭೂಮಿಯನ್ನು ಕೃಷಿಗಾಗಿ ಬಳಸಲಾಗುತ್ತಿದೆ, ಇದು ರಾಜ್ಯದ ಒಟ್ಟು ಭೂಪ್ರದೇಶದ ೬೪%ರಷ್ಟಾಗುತ್ತದೆ. ಇದರಲ್ಲಿ ಬಹುತೇಕ ಕೃಷಿ ಚಟುವಟಿಕೆಗಳು ಮಾನ್ಸೂನ್ ಮಾರುತ ತರುವ ಮಳೆಯನ್ನವಲಂಬಿಸಿದ್ದರೆ, ೨೬.೫೫ ದಷ್ಟು ಭೂಮಿಯು ಮಾತ್ರ ನೀರಾವರಿ ಸೌಲಭ್ಯವನ್ನು ಹೊಂದಿದೆ.
  • ಕರ್ನಾಟಕದಲ್ಲಿ ಸಾಕಷ್ಟು ಸಾರ್ವಜನಿಕ ಹಾಗೂ ಖಾಸಗಿ ವಲಯದ ಕೈಗಾರಿಕೆಗಳಿದ್ದು ಅವುಗಳಲ್ಲಿ ಕೆಲ ಪ್ರಮುಖವಾದವುಗಳನ್ನು ಹೀಗೆ ಹೆಸರಿಸಬಹುದು: ಹಿಂದೂಸ್ಥಾನ್ ಏರೋನಾಟಿಕ್ಸ್ ಲಿಮಿಟೆಡ್, ಭಾರತ್ ಹೆವ್ವಿ ಎಲೆಕ್ಟ್ರಿಕಲ್ಸ್ ಲಿಮಿಟೆಡ್, ಭಾರತ್ ಅರ್ಥ್ ಮೂವರ್ಸ್ ಲಿಮಿಟೆಡ್, ಇನ್ಫೋಸಿಸ್ ಮೊದಲಾದವು. ಅಲ್ಲದೆ ಭಾರತೀಯ ಬಾಹ್ಯಾಕಾಶ ಸಂಸ್ಥೆ, ಭಾರತೀಯ ಶಕಿ ಸಂಪನ್ಮೂಲ ಸಂಶೋಧನಾ ಕೇಂದ್ರ, ಕೇಂದ್ರ ಆಹಾರ ತಂತ್ರಜ್ಞಾನ ಸಂಶೋಧನಾ ಕೇಂದ್ರದ ಪ್ರಧಾನ ಕಛೇರಿಗಳಿರುವುದು ಕರ್ನಾಟಕದ ಬೆಂಗಳೂರಿನಲ್ಲಿ.
  • ಇದಲ್ಲದೆ ಮಂಗಳೂರಿನಲ್ಲಿ ಮಂಗಳೂರು ರಿಫೈನರಿ ಪೆತ್ರೋಕೆಮಿಕಲ್ಸ್ ಲಿಮಿಟೆಡ್[೧೫] ಎನ್ನುವ ತೈಲೋತ್ಪನ್ನ ಕೈಗಾರಿಕ ಘಟಕವೂ ಕಾರ್ಯ ನಿರ್ವಹಿಸುತ್ತಿದೆ. ಕರ್ನಾಟಕದಲ್ಲಿ ೧೯೮೦ರಿಂದ ಆರಂಭವಾದ ಮಹಿತಿ ತಂತ್ರಜ್ಞಾನ ಉದ್ಯಮ ಇಂದು ಬೃಹತ್ತಾಗಿ ಬೆಳೆದು ನಿಂತಿದೆ. ೨೦೦೭ ರ ಅಂಕಿ ಅಂಶಗಳ ಪ್ರಕಾರ ರಾಜ್ಯದಲ್ಲಿ ಒಟ್ಟು ಸುಮಾರು ೨೦೦೦ ಮಾಹಿತಿ ತಂತ್ರಜ್ಞಾನ ಘಟಕಗಳಿವೆ.
  • ದೇಶದ ಐಟಿ ದಿಗ್ಗಜ ಸಂಸ್ಥೆಗಳೆನಿಸಿದ ಇನ್ಫೋಸಿಸ್, ವಿಪ್ರೋ ಕೂಡ ಕರ್ನಾಟಕದಲ್ಲಿ ತಮ್ಮ ಪ್ರಧಾನ ಕಛೇರಿಯನ್ನು ಹೊಂದಿವೆ. ೨೦೦೬-೦೭ರ ಅಂಕಿ ಅಂಶಗಳ ಅಂದಾಜಿನ ಪ್ರಕಾರ ದೇಶದ ೩೮% ದಷ್ಟು ಮಾಹಿತಿ ತಂತ್ರಜ್ಞಾನ ರಪ್ತು ವಹಿವಾಟು ಕರ್ನಾಟಕದಿಂದ ಆಗಿರುತ್ತದೆ. ಈ ಎಲ್ಲಾ ಬೆಳವಣಿಗೆಗಳಿಂದಾಗಿ ಬೆಂಗಳೂರು "ಸಿಲಿಕಾನ್ ವ್ಯಾಲಿ ಆಫ್ ಇಂಡಿಯಾ" ಎಂದು ಪ್ರಸಿದ್ಧವಾಗಿದೆ.
  • ಕರ್ನಾಟಕವು ರೇಷ್ಮೆ ಉದ್ಯಮಕ್ಕೂ ಹೆಸರಾಗಿದ್ದು ರಾಜ್ಯದ ಮೈಸೂರ್ ಸಿಲ್ಕ್ ವಿಶ್ವವ್ಯಾಪಿ ಮನ್ನಣೆ ಹೊಂದಿದೆ. ರಾಜ್ಯ ಸರ್ಕಾರ ಇತ್ತೀಚೆಗೆ ಮುದ್ದೇನಹಳ್ಳಿ ಸಮೀಪ "ಸಿಲ್ಕ್ ಸಿಟಿ" ನಿರ್ಮಾಣಕ್ಕಾಗಿ ಸುಮಾರು ೭೦ ಕೋಟಿ ರೂಪಾಯಿಗಳನ್ನ ವಿನಿಯೋಗಿಸಲು ಮುಂದಾಗಿದೆ. ಬ್ಯಾಂಕಿಂಗ್ ಕ್ಷೇತ್ರದಲ್ಲಿಯು ಸಹ ರಾಜ್ಯವು ಮುಂಚೂಣಿಯಲ್ಲಿದ್ದು ದೇಶದ ೭ ಪ್ರಧಾನ ರಾಷ್ಟ್ರೀಕೃತ ಬ್ಯಾಂಕುಗಳ ಮೂಲ ನೆಲೆ ಇರುವುದು ಕರ್ನಾಟಕದ ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿವೆ.
  • ಕರ್ನಾಟಕದ ಹಟ್ಟಿ ಚಿನ್ನದ ಗಣಿಯು ದೇಶದಲ್ಲೇ ಅತಿ ಹೆಚ್ಚು ಮತ್ತು ಪ್ರಾಥಮಿಕ ಚಿನ್ನ ಉತ್ಪಾದಿಸುವ ಏಕೈಕ ಚಿನ್ನದ ಗಣಿಯಾಗಿದೆ.

ಕರ್ನಾಟಕದಲ್ಲಿ ಜನಿಸಿದ ಬ್ಯಾಂಕುಗಳುಸಂಪಾದಿಸಿ

ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ ಮತ್ತು ಉಡುಪಿ ಗಳನ್ನು ಭಾರತದ ಬ್ಯಾಂಕಿಂಗ್ನ ತೊಟ್ಟಿಲು ಅಂತ ಕರೆಯುತ್ತಾರೆ. 1880 ಮತ್ತು 1935 ರ ನಡುವೆ, ಕರಾವಳಿ ಕರ್ನಾಟಕದಲ್ಲಿ 22 ಬ್ಯಾಂಕುಗಳನ್ನು ಸ್ಥಾಪಿಸಲಾಯಿತು, ಅವುಗಳಲ್ಲಿ ಒಂಬತ್ತು ಮಂಗಳೂರು ನಗರದಲ್ಲೇ ಇದ್ದವು.

  1. ಕೆನರಾ ಬ್ಯಾಂಕ್
  2. ಸಿಂಡಿಕೇಟ್ ಬ್ಯಾಂಕ್
  3. ಕಾರ್ಪೊರೇಶನ್ ಬ್ಯಾಂಕ್
  4. ವಿಜಯ ಬ್ಯಾಂಕ್
  5. ವೈಶ್ಯ ಬ್ಯಾಂಕ್
  6. ಕರ್ನಾಟಕ ಬ್ಯಾಂಕ್

ರಾಜಕೀಯ ವ್ಯವಸ್ಥೆಸಂಪಾದಿಸಿ

  1. ಕರ್ನಾಟಕದ ಶಾಸಕಾಂಗದ ವ್ಯವಸ್ಥೆ ಭಾರತದ ಸಂಸತ್ತಿನ ವ್ಯವಸ್ಥೆಯನ್ನು ಅನುಕರಿಸುತ್ತದೆ.
  2. ಕರ್ನಾಟಕ ವಿಧಾನ ಸಭೆ ಮತ್ತು ಕರ್ನಾಟಕ ವಿಧಾನ ಪರಿಷತ್ತು ಕರ್ನಾಟಕ ಸರ್ಕಾರದ ಎರಡು ಮುಖ್ಯ ಮನೆಗಳು.
  3. ವಿಧಾನ ಸಭೆಯ ಸದಸ್ಯರು ನೇರ ಚುನಾವಣೆಗಳಲ್ಲಿ ಚುನಾಯಿತರಾದರೆ, ವಿಧಾನ ಪರಿಷತ್ತಿಗೆ ಪರೋಕ್ಷ ಚುನಾವಣೆಗಳು ನಡೆಯುತ್ತವೆ.
  4. ವಿಧಾನ ಸಭೆಯ ಸದಸ್ಯರ ಸಂಖ್ಯೆ ೨೨೪.
  5. ವಿಧಾನ ಪರಿಷತ್ತಿನ ಸದಸ್ಯರ ಸಂಖ್ಯೆ ೭೫.
  6. ವಿಧಾನ ಸಭೆಯ ಸದಸ್ಯತ್ವದ ಗರಿಷ್ಠ ಅವಧಿ ೫ ವರ್ಷಗಳಾಗಿವೆ.
  7. ವಿಧಾನ ಪರಿಷತ್ತಿನ ಸದಸ್ಯತ್ವದ ಗರಿಷ್ಠ ಅವಧಿ ೬ ವರ್ಷಗಳಾಗಿವೆ.
  8. ಮೊದಲ ವಿಧಾನ ಸಭೆ ೧೯೫೨ ರಿಂದ ೧೯೫೭ರ ವರೆಗೆ ಸೇರಿತ್ತು.
  9. ವಿಧಾನ ಸಭೆಯಲ್ಲಿ ಬಹುಮತ ಹೊಂದಿರುವ ರಾಜಕೀಯ ಪಕ್ಷದ ಅಥವಾ ರಾಜಕೀಯ ಪಕ್ಷಗಳ ಒಕ್ಕೂಟದ ನಾಯಕರು ಮುಖ್ಯಮಂತ್ರಿಗಳಾಗಿ ಆರಿಸಲ್ಪಡುತ್ತಾರೆ. ಇದುವರೆಗೆ ಒಟ್ಟು ೨೨ ಮುಖ್ಯಮಂತ್ರಿಗಳನ್ನು ಕರ್ನಾಟಕ ಕಂಡಿದೆ.
  10. ಕರ್ನಾಟಕದಲ್ಲಿ ಸಕ್ರಿಯವಾಗಿರುವ ರಾಜಕೀಯ ಪಕ್ಷಗಳಲ್ಲಿ ಕೆಲವೆಂದರೆ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್(ಕಾಂ), | ಭಾರತೀಯ ಜನತಾ ಪಕ್ಷ | ಕ್ರಾ೦ತಿರ೦ಗ ಕೆಸಿಪಿ, | ಜನತಾ ದಳ(ಜಾತ್ಯತೀತ), ಉತ್ತಮ ಪ್ರಜಾಕೀಯ ಪಾರ್ಟಿ (UPP) ಇತ್ಯಾದಿ.
  11. ಕರ್ನಾಟಕದಿಂದ ಲೋಕ ಸಭೆಗೆ ಆಯ್ಕೆ ಆಗುವವರ ಸಂಖ್ಯೆ ೨೮ ಹಾಗು ರಾಜ್ಯ ಸಭೆಗೆ ಆಯ್ಕೆ ಆಗುವವರ ಸಂಖ್ಯೆ ೧೨.

ಸ್ವಾಭಾವಿಕ ಪ್ರದೇಶಗಳುಸಂಪಾದಿಸಿ

ಕರ್ನಾಟಕ ಅನೇಕ ಅಭಯಾರಣ್ಯಗಳ ತವರು. ಇವು ಚಾಮರಾಜನಗರ ಜಿಲ್ಲೆಯ ಬಂಡೀಪುರ ಅಭಯಾರಣ್ಯಬೆಂಗಳೂರು ಜಿಲ್ಲೆಯ ಬನ್ನೇರುಘಟ್ಟ ಅಭಯಾರಣ್ಯ, ಮೈಸೂರು ಮತ್ತು ಕೊಡಗು ಜಿಲ್ಲೆಗಳ ನಾಗರಹೊಳೆ ಅಭಯಾರಣ್ಯ, ದಕ್ಷಿಣ ಕನ್ನಡ ಮತ್ತು ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಕುದುರೆಮುಖ ಹಾಗೂ ಉತ್ತರ ಕನ್ನಡ ಜಿಲ್ಲೆಯಲ್ಲಿ ಅಂಶಿ ಅಭಯಾರಣ್ಯ. ಅನೇಕ ವನ್ಯ ಮೃಗಧಾಮಗಳು ಸಹ ಕರ್ನಾಟಕದಲ್ಲಿ ಇವೆ.

ಅಭಿವೃದ್ಧಿಸಂಪಾದಿಸಿ

ಪಶು ಸಾಂಗೋಪನೆ
ಕರ್ನಾಟಕವು ಹಾಲು ಉತ್ಪಾದನೆಯಲ್ಲಿ ಗಣನೀಯ ಸಾಧನೆ ಮಾಡಿದೆ. ರಾಜ್ಯ ದಲ್ಲಿ ಒಟ್ಟು ೧.೨೫ ಕೋಟಿ ಜಾನುವಾರುಗಳಿವೆ. ಇತ್ತೀಚೆಗೆ ಜಾನುವಾರುಗಳಿಗೆ ಕಾಲುಬಾಯಿ ಜ್ವರದಿಂದಾಗಿ ೧೪,೪೪೧ (೧೯-೨-೨೦೧೪ ಕ್ಕೆ) ಜಾನುವಾರುಗಳು ಸತ್ತಿವೆ; ಲಸಿಕೆ ಹಾಕುವ ಕಾರ್ಯಕ್ರಮ ನಡೆದಿದೆ. ಹಾಲಿನ ಉತ್ಪಾದನೆ ವರ್ಷಕ್ಕೆ ೪೯ ಲಕ್ಷ ಲೀಟರ್ ನಿಂದ ೫೨-೫೩ ಉತ್ಪಾದನೆ ಆಗುತ್ತದೆ. ಸುಮಾರು ೧೫ ಲಕ್ಷ ಲೀಟರ್ ಅಗತ್ಯಕ್ಕಿಂತ ಹೆಚ್ಚು ಉತ್ಪಾದನೆ ಆಗುತ್ತಿದ್ದು, ಸಿಂಗಪುರ, ರಷ್ಯಾ, ಶ್ರೀಲಂಕಾ, ಮ್ಯನ್ಮಾರ್ ಮೊದಲಾದ ದೇಶಗಳಿಗೆ ರಪ್ತು ಮಾಡಲಾಗುತ್ತಿದೆ (19-2-2014 ಹಾಲು ಮಹಾ ಮಂಡಳಿಯ ನಿರ್ದೇಶಕ – ಎಂ. ಎಸ್. ಪ್ರೇಮನಾಥ್ ಬೆಂಗಳೂರು ಸುದ್ದಿಗೋಷ್ಠಿ – ಸುದ್ದಿಮಾಧ್ಯಮ- ಪ್ರಜಾವಾಣಿ).

ಐತಿಹಾಸಿಕ ಸ್ಥಳಗಳುಸಂಪಾದಿಸಿ

  1. ಬೆಂಗಳೂರು

ಸಂಸ್ಕೃತಿಸಂಪಾದಿಸಿ

ಕರ್ನಾಟಕದ ಕೆಲವು ಜನಪ್ರಿಯ ಸಾಂಸ್ಕೃತಿಕ ಕಲೆಗಳು:

  1. ಸಂಗೀತ: ದಕ್ಷಿಣ ಭಾರತದ ಶಾಸ್ತ್ರೀಯ ಸಂಗೀತ ಪದ್ಧತಿಯಾದ ಕರ್ನಾಟಕ ಸಂಗೀತ ಉಗಮವಾದದ್ದು ಕರ್ನಾಟಕದಲ್ಲಿಯೇ. ಕರ್ನಾಟಕದಲ್ಲಿ ಜನಪ್ರಿಯವಾಗಿರುವ ಇತರ ಸಂಗೀತ ರೂಪಗಳಲ್ಲಿ ಭಾವಗೀತೆಗಳು, ಸುಗಮ ಸಂಗೀತ, ಚಿತ್ರಗೀತೆಗಳು ಸೇರಿವೆ.
  2. ನೃತ್ಯ: ಭಾರತದ ಶಾಸ್ತ್ರೀಯ ನೃತ್ಯ ಪದ್ಧತಿಗಳಲ್ಲಿ ಹೆಸರಾದ ಭರತನಾಟ್ಯ ಕರ್ನಾಟಕದಲ್ಲಿ ಜನಪ್ರಿಯ. ಕರ್ನಾಟಕಕ್ಕೆ ವಿಶಿಷ್ಟವಾದ ಒಂದು ನೃತ್ಯಕಲೆ ಯಕ್ಷಗಾನಡೊಳ್ಳು ಕುಣಿತ ಜಾನಪದ ನೃತ್ಯ ಪದ್ಧತಿಗಳಲ್ಲಿ ಒಂದು.
  3. ಸಂಸ್ಕೃತಿಯ ಕೇಂದ್ರವಾದ ಕರ್ನಾಟಕ, ಮೈಸೂರುಹಳೇಬೀಡುಬೇಲೂರು ಮುಂತಾದ ರಮಣೀಯ ತಾಣಗಳಿಗೆ ಮನೆಯಾಗಿದೆ.

ಕಲೆಸಂಪಾದಿಸಿ

ಬಿದರಿ ಕಲೆ ಸುಮಾರು ೧೪ನೆ ಶತಮಾನ್ ದಲ್ಲಿ ಬೀದರ್ ಜಿಲ್ಲೆಯಲ್ಲಿ ಜನಿಸಿದ ಪ್ರಾಚಿನ ಕಲೆ ಯಲ್ಲಿ ಒಂದು. ಇವತ್ತಿಗೂ ಈ ಕಲೆಯ ಬೇಡಿಕೆ ದೇಶ-ವಿದೇಶದಲ್ಲಿ ತುಂಬಾ ಇದೆ. ಇತ್ತೀಚಿನ ಕಾಮ್ಮೊನ್ ವೆಅಲ್ಥ್ ಗೇಮ್ಸ್ ನ ಅತಿ ಪ್ರಮುಖ ಗಣ್ಯರಿಗೆ ಭಾರತ ದೇಶದಿಂದ ಬಿದರಿ ಕಲೆ ಉಡುಗೊರೆ ಕೊಡಲಾಗಿತ್ತು. ಮತ್ತೆ ಬಿದರಿ ಕಲೆಯ ಊಡುಗೋರೆ USA ಊ ಎಸ್ ನ ವೈಟ್ ಹೌಸ್ನಲ್ಲಿ ಕೂಡ ಇಡಲಾಗಿದೆ. ಇವು ಬಿದರಿ ಕಲೆಯ ಕೆಲವು ಉಪಾದಿಗಳು.ಇತ್ತೀಚೆಗೆ ಬಿದರಿಕಲೆಗೆ ಹೊಸ ಆಯಾಮಗಳನ್ನು ನೀಡಲಾಗಿದೆ. ಬುದ್ಧನ ರೂಪ ವನ್ನು ಹಿಂದಿ ಗಿಂತಲೂ ವಿಭಿನ್ನವಾಗಿ ಗ್ರಹಿಸಿದ ಶಿಲ್ಪಗಳು ಸಮಕಾಲೀನ ಕುಶಲಿಗಳಿಂದ ಮೂಡಿ ಬಂದಿವೆ.

ಧಾರ್ಮಿಕ ಕ್ಷೇತ್ರಗಳುಸಂಪಾದಿಸಿ

ಕರ್ನಾಟಕ: ಕೆರೆಸಂತೆ ಶ್ರೀ ಮಹಾಲಕ್ಷ್ಮೀ ಲಕ್ಕಮ್ಮ ದೇವಿ ದೇವಸ್ಥಾನ . ಸಾಗರಗಾಣಗಾಪುರಧರ್ಮಸ್ಥಳಶೃಂಗೇರಿಉಡುಪಿಮೇಲುಕೋಟೆಬಸವಕಲ್ಯಾಣಆದಿಚುಂಚನಗಿರಿಬಾಳೆ ಹೊನ್ನೂರುಹೊರನಾಡುಕಟೀಲುಗೋಕರ್ಣಸಿದ್ಧಗಂಗಾ ಮಠದ್ಯಾವನುರುಕೊಲ್ಲೂರುಮುರುಡೇಶ್ವರಶಿರ್ಸಿಕುಕ್ಕೆ ಸುಬ್ರಹ್ಮಣ್ಯಕೂಡಲ ಸಂಗಮಬನವಾಸಿಸವದತ್ತಿಗೋಲಗುಮ್ಮಟಬಾದಾಮಿಗುರಗುಂಜಿಚಾಮುಂಡಿ ಬೆಟ್ಟನಂಜನಗೂಡುನ೦ಬಿನಾಯಕನಹಳ್ಳಿವೈದ್ಯನಾಥೇಶ್ವರ-ವೈದ್ಯನಾಥಪುರಶ್ರೀ ವೈದ್ಯನಾಥೇಶ್ವರ ಸ್ವಾಮಿಅರೆಯೂರುತುಮಕೂರು ಉಗ್ರ ನರಸಿಂಹ ಸ್ವಾಮಿ, ಮದ್ದೂರಮ್ಮ-ಮದ್ದೂರು. ಬನಶಂಕರಿ ದೇವಿ – ಬನಶಂಕರಿ,ಝರಣಿ ನೃಸಿಂಹಸ್ವಾಮಿ – ಬೀದರ್, ಗುರುದ್ವಾರ ನಾನಕ್ ಝೀರಾ ಸಾಹಿಬ್ – ಬೀದರ್, ಖಿಳೆಗಾಂವ ಬಸವಣ್ಣ, ಮೂಡಬೂಳ ವೇಣುಗೋಪಾಲ ಸ್ವಾಮಿ ದೇವಾಲಯ, ಗುಲ್ಬರ್ಗಾದ ಕೋಟೆ, ಶರಣಬಸವೇಶ್ವರ ದೇವಾಲಯ, ಬಂದೇನವಾಜ್ ದರ್ಗ, ಬುದ್ಧವಿಹಾರ, ದೇವರಗುಡ್ಡ, ಮೈಲಾರ, ಮಲೆಮಹದೇಶ್ವರ, ನಂಜವದೂತ ಮಠ ಸಿರಾ ಯಲಗೂರು, ಹುಲಿಗಿಯ ಹುಲಿಗೆಮ್ಮ ದೇವಿ. ಇಟಗಿಯ ಭಿಮಕ್ಕನ ಗುಡಿ, ಬೆಂಗಳೂರಿನ ಮೂಡಲಪಾಳ್ಯದ ಭತ್ತಿಲಿಂಗೇಶ್ದವರ ದೇವಾಲಯ ಹಲವು ಧಾರ್ಮಿಕ ಕ್ಷೇತ್ರಗಳಿಂದ ಕೂಡಿದೆ.

ಭಾಷೆಗಳುಸಂಪಾದಿಸಿ

ಕರ್ನಾಟಕದಲ್ಲಿ ಅನೇಕ ಭಾಷೆಗಳನ್ನು ಮಾತನಾಡುವ ಜನರಿದ್ದಾರೆ.

ಪ್ರಮುಖರುಸಂಪಾದಿಸಿ

  1. ಸಂಗೊಳ್ಳಿ ರಾಯಣ್ಣ,
  2. ಹಕ್ಕ ಬುಕ್ಕ
  3. ಪುರಂದರದಾಸರು,
  4. ಕನಕದಾಸ,
  5. ಬಸವಣ್ಣ,
  6. ಮಧ್ವಾಚಾರ್ಯ,
  7. ಬೆಂಗಳೂರು ನಿರ್ಮಾತೃ ಕೆಂಪೇಗೌಡ,
  8. ಕೃಷ್ಣದೇವರಾಯ,
  9. ಜಯಚಾಮರಾಜೇಂದ್ರ ಒಡೆಯರ್,
  10. ನಾಲ್ವಡಿ ಕೃಷ್ಣರಾಜ ಒಡೆಯರ್
  11. ಮೋಕ್ಷಗುಂಡಂ ವಿಶ್ವೇಶ್ವರಯ್ಯ,
  12. ಎಸ್.ನಿಜಲಿಂಗಪ್ಪ ,
  13. ಬಿ.ಡಿ.ಜತ್ತಿ,
  14. ಎಸ್.ಆರ್.ಕಂಠಿ,
  15. ಅ.ನ.ಕೃಷ್ಣರಾಯರು,
  16. ಕುವೆಂಪು,
  17. ಮಾಸ್ತಿ ವೆಂಕಟೇಶ ಅಯ್ಯಂಗಾರ್,
  18. ಆಲೂರು ವೆಂಕಟರಾಯರು,
  19. ಶಿವರಾಮ ಕಾರಂತ,
  20. ವಿನಾಯಕ ಕೃಷ್ಣ ಗೋಕಾಕ,
  21. ಡಾ.ದೇಜಗೌ,
  22. ಡಾ.ಚಂದ್ರಶೇಖರ ಕಂಬಾರ,
  23. ಯು.ಆರ್.ಅನಂತಮೂರ್ತಿ,
  24. ಪೂರ್ಣಚಂದ್ರತೇಜಸ್ವಿ,
  25. ಡಾ.ಎಸ್.ಎಲ್.ಭೈರಪ್ಪ,
  26. ದ.ರಾ.ಬೇಂದ್ರೆ,
  27. ಗೊರೂರು ರಾಮಸ್ವಾಮಿ ಅಯ್ಯಂಗಾರ್,
  28. ಜಿ.ಎಸ್. ಶಿವರುದ್ರಪ್ಪ,
  29. ಪಂಜೆ ಮಂಗೇಶ ರಾಯರು,
  30. ಡಾ.ಡಿ ವಿ ಗುಂಡಪ್ಪ,
  31. ಡಾ. ಚಿದಾನಂದಮೂರ್ತಿ,
  32. ಡಾ. ಸೂರ್ಯನಾಥ ಕಾಮತ್,
  33. ದೇವರಾಜ ಅರಸು,
  34. ಅಕ್ಕಮಹಾದೇವಿ,
  35. ಕಿತ್ತೂರು ರಾಣಿ ಚೆನ್ನಮ್ಮ,
  36. ಒನಕೆ ಓಬವ್ವ,
  37. ಸಂಗೊಳ್ಳಿ ರಾಯಣ್ಣ,
  38. ಕಾರ್ನಾಡ್ ಸದಾಶಿವರಾಯರು,
  39. ಡಾ.ರಾಜ್ ಕುಮಾರ್,
  40. ಡಾ.ವಿಷ್ಣುವರ್ಧನ್,
  41. ಡಾ.ರಾಜಾರಾಮಣ್ಣ,
  42. ಪ್ರೊ. ಯು. ಆರ್. ರಾವ್,
  43. ಪ್ರೊ. ಸಿ ಎನ್ ಆರ್ ರಾವ್,
  44. ಎನ್ ಆರ್ ನಾರಾಯಣ ಮೂರ್ತಿ,
  45. ಸವಾಯಿ ಗಂಧರ್ವ,
  46. ಪಂ.ಭೀಮಸೇನ್ ಜೋಶಿ,
  47. ಗಂಗೂಬಾಯಿ ಹಾನಗಲ್,
  48. ಪ್ರೊ.ಜಿ.ವೆಂಕಟಸುಬ್ಬಯ್ಯ,
  49. ಕೆ.ಎಸ್.ನರಸಿಂಹಸ್ವಾಮಿ,
  50. ಕೆ.ಎಸ್.ನಿಸಾರ್ ಅಹಮದ್
  51. ದೇವನೂರು ಮಹಾದೇವ
  52. ಸಂತೋಷ್ ಹೆಗ್ಡೆ,
  53. ಕಾಗೋಡು ತಿಮ್ಮಪ್ಪ,
  54. ನಾಡೋಜ ಚನ್ನವೀರ ಕಣವಿ,
  55. ನಾಡೋಜ ಪಾಟೀಲ ಪುಟ್ಟಪ್ಪ,
  56. ಶಂಕರ್ ನಾಗ್
  57. ಬಿ ಎಂ ಶ್ರೀಕಂಠಯ್ಯನವರು
  58. ಡಾ ವೀರೇಂದ್ರ ಹೆಗ್ಗಡೆ ಅವರು

ರಾಜಕಾರಣದಲ್ಲಿ ಪ್ರಮುಖರುಸಂಪಾದಿಸಿ

ಪ್ರವಾಸೋದ್ಯಮಸಂಪಾದಿಸಿ

ಕರ್ನಾಟಕದಲ್ಲಿ ನೈಸರ್ಗಿಕ ಸೌಂದರ್ಯಯುಕ್ತ ಪ್ರದೇಶಗಳು, ಹಾಗು ಐತಿಹಾಸಿಕ ಸ್ಥಳಗಳು ಪ್ರವಾಸೋದ್ಯಮವನ್ನು ಒದಗಿಸುತ್ತವೆ.

ಮುಳ್ಳಯ್ಯನಗಿರಿ

ಚಿತ್ರಾವಳಿಸಂಪಾದಿಸಿ

ಈ ಲೇಖನಗಳನ್ನೂ ನೋಡಿಸಂಪಾದಿಸಿ

ಎತ್ತಿತೋರಿಸಲಾದ ಪೋಸ್ಟ್

Horticulture Bidar