somaling m uppar kawalga

somaling m uppar kawalga
Somaling Sulubai uppar

ಗುರುವಾರ, ಮಾರ್ಚ್ 25, 2021

Karnataka state

ಕರ್ನಾಟಕ

ಭಾರತದ ಒಂದು ರಾಜ್ಯ
{{#if:ಕನ್ನಡ|

ಭಾರತದ ಐದು ಪ್ರಮುಖ ದಕ್ಷಿಣಾತ್ಯ ರಾಜ್ಯಗಳಲ್ಲಿ ಕರ್ನಾಟಕವು ಅತಿ ದೊಡ್ಡ ರಾಜ್ಯ ಹಾಗೂ ದೇಶದ ಆರನೇ ದೊಡ್ಡ ರಾಜ್ಯ. ೧೯೭೩ ಕ್ಕೆ ಮೊದಲು ಕರ್ನಾಟಕದ ಹೆಸರು ಮೈಸೂರು ರಾಜ್ಯ ಎಂದಿತ್ತು.[೩] ಇದಕ್ಕೆ ಕಾರಣ ಕರ್ನಾಟಕ ಏಕೀಕರಣದ ಮೊದಲ ಸೃಷ್ಟಿ ಮೈಸೂರು ಸಂಸ್ಥಾನವನ್ನು ಆಧರಿಸಿದ್ದು (೧೯೫೦ ರಲ್ಲಿ). ೧೯೫೬ ರಲ್ಲಿ ಸುತ್ತ-ಮುತ್ತಲ ರಾಜ್ಯಗಳ ಕನ್ನಡ ಪ್ರಧಾನ ಪ್ರದೇಶಗಳನ್ನು ಸೇರಿಸಲಾಯಿತು. "ಕರ್ನಾಟಕ" ಎಂಬ ಹೆಸರಿಗೆ ಅನೇಕ ವ್ಯುತ್ಪತ್ತಿಗಳು ಪ್ರತಿಪಾದಿಸಲ್ಪಟ್ಟಿವೆ. ಎಲ್ಲಕ್ಕಿಂತ ಹೆಚ್ಚಾಗಿ ಒಪ್ಪಲ್ಪಟ್ಟಿರುವ ವ್ಯುತ್ಪತ್ತಿ ಎಂದರೆ ಕರ್ನಾಟಕ ಎಂಬುದು "ಕರು+ನಾಡು" ಎಂಬುದರಿಂದ ವ್ಯುತ್ಪತ್ತಿಯನ್ನು ಪಡೆದಿದೆ. ಕರು ನಾಡು ಎಂದರೆ ಕಪ್ಪು ಮಣ್ಣಿನ ನಾಡು, "ಎತ್ತರದ ಪ್ರದೇಶ" ಎಂದು ಅರ್ಥ. ಕರ್ನಾಟಕ ರಾಜ್ಯದ ಸಮುದ್ರ ಮಟ್ಟದಿಂದ ಸರಾಸರಿ ಎತ್ತರ ೧೫೦೦ ಅಡಿ ಇದ್ದು ಇದು ಭಾರತದಲ್ಲಿ ಅತಿ ಹೆಚ್ಚಿನ ಸರಾಸರಿ ಎತ್ತರವುಳ್ಳ ರಾಜ್ಯಗಳಲ್ಲಿ ಒಂದು.[೪]

ಕರ್ನಾಟಕ
ಕರುನಾಡು
ಕರ್ನಾಟಕ ರಾಜ್ಯ ನಕಾಶೆ
ಕರ್ನಾಟಕ ರಾಜ್ಯ ನಕಾಶೆ
ಕರ್ನಾಟಕ ಲಾಂಛನ
ಲಾಂಛನ
ದೇಶ ಭಾರತ
ಪ್ರದೇಶದಕ್ಷಿಣ ಭಾರತ
ಮಾಹಿತಿ೧ ನವೆಂಬರ್ ೧೯೫೬
ರಾಜಧಾನಿಬೆಂಗಳೂರು
ಜಿಲ್ಲೆಗಳು31
ಸರ್ಕಾರ
 - ರಾಜ್ಯಪಾಲರುವಜುಭಾಯ್ ರೂಢಾಭಾಯ್ ವಾಲಾ
 - ಮುಖ್ಯಮಂತ್ರಿಬಿ.ಎಸ್. ಯಡಿಯೂರಪ್ಪ
 - ಶಾಸಕಾಂಗದ್ವಿಸಭೆ (224 + 75 seats)
 - ಉಚ್ಛ ನ್ಯಾಯಾಲಯಕರ್ನಾಟಕ ಉಚ್ಛ ನ್ಯಾಯಾಲಯ
ವಿಸ್ತೀರ್ಣ [೧]
 - ಒಟ್ಟು೧,೯೧,೭೯೧ ಚದರ ಕಿಮಿ (೭೪,೦೫೦.೯ ಚದರ ಮೈಲಿ)
ಅತ್ಯಂತ ಹೆಚ್ಚು ಎತ್ತರ೧,೯೨೫ ಮೀ ಮೀ (೬,೩೧೬ ಅಡಿ)
ಅತ್ಯಂತ ಕಡಿಮೆ ಎತ್ತರ೦ ಮೀ ಮೀ (೦ ಅಡಿ)
ಜನಸಂಖ್ಯೆ (೨೦೧೧)[೨]
 - ಒಟ್ಟು೬,೧೧,೩೦,೭೦೪
 - ಸಾಂದ್ರತೆ೩೧೮.೭/ಚದರ ಕಿಮಿ (೮೨೫.೫/ಚದರ ಮೈಲಿ)
ಕನ್ನಡಕನ್ನಡ
ಅಂತರ್ಜಾಲ ತಾಣ: [http://www.karnataka.gov.in/Pages/kn.aspx www.karnataka.gov.in

ಸಮುದ್ರದಿಂದ, ವಾಯವ್ಯದಲ್ಲಿ ಗೋವದಿಂದ, ಉತ್ತರದಲ್ಲಿ ಮಹಾರಾಷ್ಟ್ರದಿಂದ, ಪೂರ್ವದಲ್ಲಿ ತೆಲಂಗಾಣ ಮತ್ತು ಆಂಧ್ರ ಪ್ರದೇಶದಿಂದ, ಆಗ್ನೇಯದಲ್ಲಿ ತಮಿಳುನಾಡಿ ನಿಂದ, ನೈಋತ್ಯದಲ್ಲಿ ಕೇರಳದಿಂದ ಸುತ್ತುವರಿಯಲ್ಪಟ್ಟಿದೆ. ೨೦೦೧ ರ ಜನಗಣತಿಯಂತೆ, ೫ ಕೋಟಿಗೂ ಹೆಚ್ಚು ಜನಸಂಖ್ಯೆ ಇರುವ ಹತ್ತು ಭಾರತೀಯ ರಾಜ್ಯಗಳಲ್ಲಿ ಕರ್ನಾಟಕವೂ ಒಂದು.

  • ಕರ್ನಾಟಕದ ರಾಜಧಾನಿಯಾದ ಬೆಂಗಳೂರು[೫] ಮಾತ್ರ 1.30 ಕೋಟಿಕ್ಕಿಂತ ಹೆಚ್ಚಿನ ಜನಸಂಖ್ಯೆಯನ್ನು ಹೊಂದಿದ ನಗರ. ಇತರ ಪ್ರಮುಖ ನಗರಗಳೆಂದರೆ ಮೈಸೂರುಶಿವಮೊಗ್ಗಹುಬ್ಬಳ್ಳಿ-ಧಾರವಾಡಮಂಗಳೂರುದಾವಣಗೆರೆಬಳ್ಳಾರಿಕಲಬುರಗಿವಿಜಯಪುರ ಮತ್ತು ಬೆಳಗಾವಿ[೬]. ಪೂರ್ವ ಶಿಲಾಯುಗದಷ್ಟು ಪ್ರಾಚೀನತೆಯಿರುವ ಕರ್ನಾಟಕವು ಭಾರತದ ಅನೇಕ ಪ್ರಬಲ ಸಾಮ್ರಾಜ್ಯಗಳಿಗೆ ನೆಲೆಬೀಡಾಗಿದೆ.
  • ಈ ಸಾಮ್ರಾಜ್ಯಗಳಿಂದ ಆಶ್ರಯ ಪಡೆದಿರುವ ಅನೇಕ ತತ್ವಜ್ಞಾನಿಗಳು ಮತ್ತು ಕವಿಗಳಿಂದ ಆರಂಭಿಸಲ್ಪಟ್ಟಿರುವ ಸಾಮಾಜಿಕ, ಧಾರ್ಮಿಕ ಹಾಗು ಸಾಹಿತ್ಯಕ ಚಳವಳಿಗಳು ಇಂದಿನವರೆಗೂ ನಡೆದುಕೊಂಡು ಬಂದಿವೆ.ಕನ್ನಡ ಭಾಷೆಯ ಸಾಹಿತಿಗಳು ಭಾರತದಲ್ಲಿ ಅತಿ ಹೆಚ್ಚು (ಹಿಂದಿ ಭಾಷೆಯಲ್ಲಿ ಬಿಟ್ಟು) ಜ್ಞಾನಪೀಠ ಪ್ರಶಸ್ತಿ ಪಡೆದಿದ್ದಾರೆ. ಕರ್ನಾಟಕವು ಭಾರತದ ಶಾಸ್ತ್ರೀಯ ಸಂಗೀತ ಪರಂಪರೆಗಳಾದ ಕರ್ನಾಟಕ ಸಂಗೀತ ಶೈಲಿಗೆ ಹಾಗು ಹಿಂದೂಸ್ಥಾನಿ ಸಂಗೀತ ಶೈಲಿಗೆ ಮಹತ್ತರವಾದ ಕೊಡುಗೆ ನೀಡಿದೆ.[೭]



ಕಾಮೆಂಟ್‌ಗಳಿಲ್ಲ:

ಎತ್ತಿತೋರಿಸಲಾದ ಪೋಸ್ಟ್

Horticulture Bidar