somaling m uppar kawalga

somaling m uppar kawalga
Somaling Sulubai uppar

ಶುಕ್ರವಾರ, ಮೇ 21, 2021

ಕನ್ನಡ ಸಾಹಿತ್ಯ

🌼🌼ಸಾಮಾನ್ಯ ಕನ್ನಡದ ಪ್ರಮುಖ ಪ್ರಶ್ನೆಗಳು :::


1. ಚಿಮಣ ಪಾತ್ರ ಇರುವ ಕಾದಂಬರಿ ಯಾವುದು?
✅ಗ್ರಾಮಾಯಣ 

2 . 'ಅರ್ಥಾಲಂಕಾರ ರಹಿತಾ ವಿಧವೇವ ಸರಸ್ವತೀ'ಈ ಹೇಳಿಕೆ ಇರುವುದು.
✅ಅಗ್ನಿ ಪುರಾಣ 

3 . ಶ್ರವಣ ಬೆಳಗೊಳದ ಶಾಸನದಲ್ಲಿ ಈ ಮುನಿಯ ಉಲ್ಲೇಖವಿದೆ.
✅ನಂದಿಸೇನ 

4 . ಏಕೈಕ ಹಸ್ತಪ್ರತಿ ಬಳಸಿ ಸಂಪಾದಿತವಾದ ಕೃತಿ ಯಾವುದು?
✅ನಾಗವರ್ಮನ ಕರ್ನಾಟಕ ಕಾದಂಬರಿ 

5 . ಭಾರತೀಯ ಶಾಸನ ಸಾಹಿತ್ಯ ಪಿತಾಮಹ
✅ಫ್ಲೀಟ್ 

6 ."ನಾನು ಯೊಚಿಸಬಲ್ಲೆ ಆದುದರಿಂದ ನಾನಿದ್ದೇನೆ"
✅ಡೆಕಾರ್ತ 

7 .ಮುದ್ದಣನ ರತ್ನಾವಳಿ ಎನ್ನುವುದು
✅ಯಕ್ಷಗಾನ 

8 . ಗೋಪಾಲಕೃಷ್ಣ ಅಡಿಗರ ಪಂಪ ಪ್ರಶಸ್ತಿ ಪಡೆದ ಕೃತಿ ಯಾವುದು?
✅ಸುವರ್ಣ ಪುತ್ಥಳಿ

9 . 'ವೈಶ್ರವಣ' ಅರಸನ ಬಗ್ಗೆ ಉಲ್ಲೇಖವಿರುವ ಕೃತಿ ಯಾವುದು?
✅ಮಲ್ಲಿನಾಥ ಪುರಾಣ 

10 . ಮಲುಹಣ ಮಲುಹಣಿಯ ರ ಪ್ರಣಯ ಜೀವನ ಕುರಿತು ಇರುವ ಹರಿಹರನ ರಗಳೆ ಯಾವುದು
✅ಕುಂಬಾರ ಗುಂಡಯ್ಯನ ರಗಳೆ 

11 . 'ಕಬ್ಬಿನಂತಿರಬೇಕು ಬಿದಿರಂತೆ ರಚಿಸಲೇ 
ಕಬ್ಬ ಹೇಳಲೇ ಸರಸ್ವತಿಯೇ'ಈ ಪಾದದಲ್ಲಿರುವ ಛಂದೋಬಂಧ
✅ಸಾಂಗತ್ಯ 

12 . ಸ್ತ್ರೀ ಕೇಂದ್ರಿತ ಚಿಂತನೆಗೆ ಅಭಿವ್ಯಕ್ತಿಯನ್ನು ಕೊಟ್ಟ ಲೇಖಕಿ ಯಾರು?
✅ಸಿಮೋನ ದ ಬೋವಾ 

13 . ಇದೊಂದು ರೂಪಾಂತರಿತ ಕವಿತೆಯಾಗಿದೆ.
✅ಅಣ್ಣನ ವಿಲಾಪ

14 .ಕಂದದಲ್ಲಿ ೧,೩,೫,೭ ನೇಯ ಸ್ಥಾನದಲ್ಲಿ ಈ ಗಣ ಬರಬಾರದು
✅U_U 

15 . 'ಓದುವ ಕಿವಿ, ಮನಸ್ಸಿಗೆ ಶುಭವಾದ ಹಿತವಾದ ಭಾವವನ್ನು ಸ್ಪುರಿಸುವಂತಹದು'
✅ಕಾಂತಿ 

16 . ಇದು ಶ್ರೀಕೃಷ್ಣ ಆಲನಹಳ್ಳಿಯವರ ಕಾವ್ಯ
✅ಮಣ್ಣಿನ ಹಾಡು

17 . "ನೀ ಪುಷ್ಪವತಿಯಾದಲ್ಲಿ ಫಲವತಿಯಾಗು ನಡೆ ರಾಜಭವನದಲ್ಲಿ" ಈ ಕಾವ್ಯದ ಸಾಲು
✅ಕುಮಾರವ್ಯಾಸ ಭಾರತ

18 .'ಅಪ್ರತಿಮ ವೀರ ಚರಿತೆ 'ಯ ಕತೃವಿನ ಆಶ್ರಯದಾತನಾರು?
✅ಚಿಕ್ಕದೇವರಾಯ 

19 . ಚಂದ್ರಹಾಸನ ಪ್ರಸಂಗ ವಿರುವ ಕಾವ್ಯ ಯಾವುದು?
✅ಜೈಮಿನಿ ಭಾರತ 

20 .' ಸಂಕೋಲೆಯೊಳಗಿಂದ 'ಇದು ಇವರ ಕಾದಂಬರಿಯಾಗಿದೆ
✅ಅನುಪಮ ನಿರಂಜನ್ 

21 . ಅತ್ತಿಮಬ್ಬೆ ಕುರಿತು ತಿಳಿಸುವ ಶಾಸನ ಇದು
✅ಲಕ್ಕುಂಡಿ ಶಾಸನ 

22 . "ಶೃಂಗಾರಮಂ ಕಾವ್ಯ ಬಂಧನದೊಳ್ ತಾಂ ಸೆರೆಗೆಯ್ದ ಮೆಯ್ಮೆಯೊಳಿವಂ ಶೃಂಗಾರಕಾರಾಗೃಹಂ"ಎಂದು ಈ ಕವಿ ಬಣ್ಣಿಸಿದ್ದಾನೆ?
✅ನೇಮಿಚಂದ್ರ 

23 . "ನೀನ್ಯಾಕೋ ನಿನ್ನ ಹಂಗ್ಯಾಕೊ ಕಾಮದ ನಿನ್ನ ನಾಮದ ಬಲವೊಂದಿದ್ದರೆ ಸಾಕೋ" ಇವರ ಕೀರ್ತನೆಯ ಸಾಲು
✅ಪುರಂದರದಾಸರು 

24 ."ಸಂಜೆಗಳಿಗೆ ಜಳಕ ಮಾಡಿಸೆ" ಇದು ಇವರ ಕವನ ಸಾಲು. ✅ಪುತಿನ 

25 . ವೀರಮ್ಮಾಜಿ ಪಾತ್ರ ಈ ಕಾದಂಬರಿಯಲ್ಲಿದೆ
✅ಚೆನ್ನಬಸವನಾಯಕ  

26 . ೨೪ ತೀರ್ಥಂಕರ ಮತ್ತು ೬೪ ಶಲಾಕಾ ಪುರುಷರ ಚರಿತತ ಇರುವ ಕೃತಿ
✅ಚಾವುಂಡರಾಯ ಪುರಾಣ 

27 .ಶ್ರೀಕೃಷ್ಣ ಪಾರಿಜಾತ ಈ ನಾಟಕದ ಕತೃ ಯಾರು?
✅ಅಪರಾಳ ತಮ್ಮಣ್ಣ 

28 .ಕಿಳ್ಳೆ ಕ್ಯಾತ ಜನಾಂಗದವರಿಂದ ಹುಟ್ಟಿಕೊಂಡ ಆಟ ಯಾವುದು?
✅ತೊಗಲುಗೊಂಬೆಯಾಟ 

29 ."ತದದೋಷೌ ಶಬ್ದಾರ್ಥೌ ಸಗುಣಾಲಂಕೃತೀ ಪುನಃ ಕ್ವಾಪಿ "ಇದು ಇವರ ಲಕ್ಷಣ
✅ತಿರುಮಲಾರ್ಯ 

30 .ವಿಭಾವ ಅನುಭಾವ ಸಂಚಾರಿ ಭಾವಗಳಿಂದ ಪುಷ್ಟಿಗೊಂಡ ಪ್ರಕರ್ಷಸ್ಥಿತಿಗೇರಿದ ಸ್ಥಾಯಿ ಭಾವವೇ ರಸ ಎಂದು ರಸ ಕಲ್ಪನೆ ಮಾಡಿಸಿದವರು ಯಾರು?
✅ಭಟ್ಟಲೊಲ್ಲಟ

31 .ಬಾಯೊಗ್ರಾಫಿಯಾ ಲಿಟರೇರಿಯಾ ಕೃತಿಯ ಲೇಖಕರು ಯಾರು?
✅ಕೋಲ್ರಿಜ್ 

32 .ಸಾಧಾರಣೀಕರಣಕ್ಕೆ ಸಂವಾದಿಯಾದ ಪಾಶ್ಚಾತ್ಯ ಪರಿಕಲ್ಪನೆ
✅ಮಾನಸೀಕ ದೂರ 

33 .ಕಬ್ಬುನದ ಶುನಕನ ತಂದು ಪರುಷವ ಮುಟ್ಟಿಸಲೊಡನೆ ಹೊನ್ನಶುನಕನಪ್ಪುದಲ್ಲದೆ ಪರುಷವಾಗಲರಿಯದು ನೋಡಾ ಎಂದು ಹೇಳಿದ ವಚನಕಾರಾನಾರು?
✅ಚೆನ್ನಬಸವಣ್ಣ 

34 .ಕವಿ ಕರ್ಣ ರಸಾಯನ ಎಂಬ ಅಲಂಕಾರ ಗ್ರಂಥವನ್ನು ರಚಿಸಿದವರು ಯಾರು?
✅ಷಡಕ್ಷರ 

35 .ಗೋಡೆ ಬೇಕೆ ಗೋಡೆ ? ನಾಟಕದ ಕತೃ
✅ಎನ್ ರತ್ನ 

36. ಜಯರಾಮ ಎಂಬ ದೇಶಭಕ್ತನ ಪಾತ್ರವಿರುವ ಕಾದಂಬರಿ ಯಾವುದು?
✅ಶೋಕಚಕ್ರ 

37. ಕನ್ನಡದ ಮೊದಲ ಸಾಮಾಜೀಕ ನಾಟಕ ಯಾವುದು? 
✅ಇಗ್ಗಪ್ಪ ಹೆಗ್ಗಡೆ ವಿವಾಹ ಪ್ರಹಸನ 

38.The heritage of karanataka ಈ ಕೃತಿಯ ಲೇಖಕರು ಯಾರು?
✅ರಂ.ಶ್ರೀ ಮುಗಳಿ 

39.ಇಬ್ಸನ್ ನ 'ದಿ ವಾರಿಯರ್ಸ ಆಪ್ ಹೆಲ್ಜಿಲೆಂಡ'ರ ಕನ್ನಡದಲ್ಲಿ ರೂಪಾಂತರಗೊಂಡು
✅ಆರ್ಯಕ 

40.ದೇನಾನಂ ಪ್ರಿಯ ಅಶೋಕ ಎಂಬ ಸಾಲಿನ ಶಾಸನ ಈ ಸ್ಥಳದಲ್ಲಿ ದೊರಕಿದೆ
✅ಮಸ್ಕೀ 

41.'ಅಭಿನವ ಶರ್ವ ವರ್ಮ' ಎಂಬ ಬಿರುದುಳ್ಳ ಕವಿ
✅೨ನೇ ನಾಗವರ್ಮ 

42.ಅಲ್ಲಮ ಪ್ರಭುವಿನೊಲ್ಮೆಯಿಂ ಈ ಕಮನೀಯ ಕಾವ್ಯಮಂ ಉಸಿರ್ದೆಂ ಎಂದು ಅಲ್ಲಮಪ್ರಭುವಿನ ಬಗ್ಗೆ ಹೇಳಿದವರು ಯಾರು?
✅ಸೋಮರಾಜ 

43.ಕಲೆಗಾಗಿ ಕಲೆ ಎಂಬ ನಿಲುವನ್ನು ಅಲ್ಲ ಗೆಳೆಯುವ ವಿಮರ್ಶಾ ಮಾರ್ಗ ಯಾವುದು?
✅ಸಮಾಜ ಶಾಸ್ತ್ರೀಯ ವಿಮರ್ಶೆ 

44.ಪಾಶ್ಚಾತ್ಯರಲ್ಲಿ ಸಾಹಿತ್ಯ ವಿಮರ್ಶೆ ಇವರಿಂದ ಪ್ರಾರಂಭವಾವಿತು?
✅ಡ್ರೈಡ್ರನ್ 

45.ರುದ್ರವೀಣೆ,ನರಬಲಿ ಕ್ರಾಂತಿಕಾರಿ ಕವನಗಳ ಲೇಖಕ
✅ದ.ರಾ.ಬೇಂದ್ರೆ 

46.ಜೀವನ ವಿಕಾಸವಿಲ್ಲದೆ ಸಾಹಿತ್ಯದ ಉದಯವೂ ಇಲ್ಲ,ವಿಕಾಸವೂ ಇಲ್ಲ ಎಂದು ಹೇಳಿದವರು
✅ರಂ.ಶ್ರೀ. ಮುಗಳಿ 

47.ರಾಮಾಯಾಣದ ಕತೃ ವಾಲ್ಮಿಕೀಯ ತಂದೆ ಯಾರು?
✅ಪ್ರಚೇತನ

48.ಕವಿರಾಜ ಮಾರ್ಗದಲ್ಲಿ ಹೇಳದಿರುವ ಪ್ರಾಸ ಯಾವುದು?
✅ಹಯಪ್ರಾಸ್ 

49.ಕನ್ನಡದ ಮೊದಲ ಮುಸ್ಲಿಂ ತತ್ವ ಪದಕಾರ
✅ಗುರು ಖಾದರಿ ಪೀರಾ 

50'.ಬಾಳ್ಗೆ ಮೆಚ್ಚುಗೊಟ್ಟರು 'ಎಂಬ ಮಾತು ಬರುವ ಶಾಸನ
✅ಆತ್ಕೂರು ಶಾಸನ
💐✍💐✍💐✍💐✍

ಕಾಮೆಂಟ್‌ಗಳಿಲ್ಲ:

ಎತ್ತಿತೋರಿಸಲಾದ ಪೋಸ್ಟ್

Horticulture Bidar